ಕುರ್ಚಿಗಾಗಿ ದ್ವೇಷ ಹುಟ್ಟಿಸುತ್ತಿರುವ ಮೋದಿ: ಡಿಬಿ

ದಾವಣಗೆರೆ, ಏ. 29- ಪ್ರಧಾನಿ ಮೋದಿಯವರದ್ದು ವಿಕಸಿತ ಭಾರತವಲ್ಲ, ವಿನಾಶ ಭಾರತ. ಪ್ರಧಾನಿ ಕುರ್ಚಿಗಾಗಿ ಒಂದೇ ತಾಯಿಯ ಮಕ್ಕಳಂತಿರುವ ಹಿಂದೂ-ಮುಸ್ಲಿಮರಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣೆ ನಡೆದಿರುವ ಉತ್ತರ ಭಾಗದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿದ್ದರಿಂದ ಮೋದಿ ದಕ್ಷಿಣದತ್ತ ಓಡಿ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಿನ್ನೆ ಹಾವೇರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಮತದಾರರಿಗಾಗಿ ಸಮಾವೇಶ ನಡೆದರೂ ಜನ ಸೇರಿಲ್ಲ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ. ಸಮಾವೇಶದಲ್ಲಿ ಮೋದಿಗೆ ಕಮಲ ಅರಳುವ ಟೋಪಿ ಹಾಕುವಾಗ ಟೋಪಿ ಜಾರಿ  ಬಿದ್ದುದೇ ಬಿಜೆಪಿ ಸೋಲಿಗೆ ಸೂಚನೆ ಎಂದು ಬಸವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಸ್.ಎಂ. ಜಯಪ್ರಕಾಶ್, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್, ಬಿ.ಎಚ್. ಉದಯಕುಮಾರ್, ಸುರೇಶ್, ಮುಬಾರಕ್‌ ಇತರರಿದ್ದರು.

error: Content is protected !!