ಪಕ್ಷೇತರ ಅಭ್ಯರ್ಥಿಯಾಗಿ ಭಜರಂಗ ದಳ ಕಾರ್ಯಕರ್ತ ಪ್ರಸನ್ನ

ದಾವಣಗೆರೆ, ಏ.16- ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಚನ್ನಗಿರಿ ತಾಲ್ಲೂಕಿನ ಬಜರಂಗ ದಳ ಕಾರ್ಯಕರ್ತ ಬಿ.ಆರ್. ಪ್ರಸನ್ನ ಕಣಕ್ಕಿಳಿಯಲಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಅವರು,  ದಾವಣಗೆರೆ ಜಿಲ್ಲೆಗೆ ಐಟಿ ಕಂಪನಿ, ಏರ್‌ಪೋರ್ಟ್ ತರುವುದರ ಜತೆಗೆ ಸರಕಾರಿ ಶಾಲಾ-ಕಾಲೇಜು ಸುಧಾರಣೆ ಸೇರಿದಂತೆ ನಾನಾ ಜನಪರ ಕಾರ್ಯ ಕೈಗೊಳ್ಳುವ ಉದ್ದೇಶ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಡಿದ್ದು ದಿನಾಂಕ 18ರಂದು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

error: Content is protected !!