ರಾಮನವಮಿ : ನಗರದಲ್ಲಿ ಇಂದು ಅಭಿಷೇಕ, ಪಾನಕ-ಕೋಸಂಬರಿ ವಿತರಣೆ

ರಾಮನವಮಿ : ನಗರದಲ್ಲಿ ಇಂದು  ಅಭಿಷೇಕ, ಪಾನಕ-ಕೋಸಂಬರಿ ವಿತರಣೆ

ಶ್ರೀ ರಾಮಮಂದಿರ ಸೇವಾ ಸಮಿತಿ ಸದಸ್ಯರು ಹಾಗೂ ದಾವಣಗೆರೆ ಯೋಗ ಬಂಧುಗಳು ಹಾಗೂ ಶ್ರೀ ರಾಮ ಭಕ್ತರ ಸಂಯುಕ್ತಾಶ್ರಯದಲ್ಲಿ   ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಷೇಕ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 7 ರಿಂದ 9ರವರೆಗೆ ಶ್ರೀ ರಾಮ ಭಕ್ತರಿಂದ ಉತ್ಸವ ಮೂರ್ತಿಗೆ ಕ್ಷೀರಾಭಿಷೇಕ, ಬೆಳಿಗ್ಗೆ 9 ರಿಂದ 11ರವರೆಗೆ ಶ್ರೀ ರಾಮ ತಾರಕ ಹೋಮ, ಬೆಳಿಗ್ಗೆ 11 ರಿಂದ 11.30ರವರೆಗೆ ಶ್ರೀರಾಮ ಮೂರ್ತಿಗೆ ತೊಟ್ಟಿಲು ಸೇವೆ ನೆರವೇರುವುದು.

ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ ಶ್ರೀ ರಾಮನವಮಿ ಮತ್ತು ಲೋಕಕಲ್ಯಾಣಕ್ಕಾಗಿ ಭಜನಾ ಗ್ರೂಪ್ ಸದಸ್ಯರಿಂದ ಶ್ರೀ ರಾಮಭಜನೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಗುವುದು. ರಾತ್ರಿ 8 ರಿಂದ ಪ್ರಭು ಶ್ರೀರಾಮನಿಗೆ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ.

error: Content is protected !!