ಮೂರನೇ ದಿನ, 3 ನಾಮಪತ್ರಗಳ ಸಲ್ಲಿಕೆಯೊಂದಿಗೆ 18 ಕ್ಕೆ ಏರಿಕೆ

ದಾವಣಗೆರೆ, ಏ. 16 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ಇಂದು ಮೂವರು ಅಭ್ಯರ್ಥಿಗಳಿಂದ 3 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. 

ನಾಮಪತ್ರ ಸಲ್ಲಿಸಿದವರ ವಿವರ : ಅಖಿಲ ಭಾರತ ಹಿಂದೂ ಮಹಾ ಪಕ್ಷದಿಂದ ಎ.ಕೆ.ಗಣೇಶ್, ರಾಣಿ ಚೆನ್ನಮ್ಮ ಪಾರ್ಟಿಯಿಂದ ವೀರೇಶ್ ಎಸ್. ಪಕ್ಷೇತರರಾಗಿ ಬರ್ಕತ್ ಅಲಿ ಇಂದು ನಾಮಪತ್ರ ಸಲ್ಲಿಸಿದವರು. ಇದುವರೆಗೆ ಒಟ್ಟು 15 ಅಭ್ಯರ್ಥಿಗಳಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ.

error: Content is protected !!