ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ

ಸಡಗರ-ಸಂಭ್ರಮದಿಂದ ರಂಜಾನ್ ಆಚರಣೆ

ಹರಪನಹಳ್ಳಿ, ಏ.11- ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಗುರುವಾರ ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ  ಆಚರಿಸಿದರು.

ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪದ ಹಿಂಭಾಗದ ದರ್ಗಾದಲ್ಲಿ ಅಲ್‌ ಹದೀಸ್ ಪಂಗಡದವರು, ಹಡಗಲಿ ರಸ್ತೆಯ ದರ್ಗಾದಲ್ಲಿ ಅಲ್‌ ಸುನ್ನಿ ಪಂಗಡದವರು, ಎಚ್‌ಪಿಎಸ್ ಕಾಲೇಜು ಹಿಂಭಾಗದಲ್ಲಿ ಹಕ್ ಸಮಿತಿಯವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರೂ ಸಹ ಸಾಮೂಹಿಕ ಪ್ರಾರ್ಥನೆ ಮಾಡಿದರು. ಈ ವೇಳೆ ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ, ಹಬ್ಬದ ಶುಭಾಶಯ ತಿಳಿಸಿದರು.

ನಾನು ಮುಸಲ್ಮಾನ ಸಮಾಜದವರಿಗೆ ನೀಡಿದ ಭರವಸೆ ಈಡೆರಿಸಿದ್ದೇನೆ, ಉಳಿದ ಕಾಮಗಾರಿಗಳನ್ನು  ಬರುವ ರಂಜಾನ್ ವೇಳೆಗೆ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

ಮೌಲಾನಾ ಫೀರ್‌ಸಾಹೆಬ್, ಅಂಜುಮನ್ ಅಧ್ಯಕ್ಷ ಮುಜುಬರ್ ರೆಹಮಾನ್,  ಪುರಸಭೆ ಮಾಜಿ ಉಪಾಧ್ಯಕ್ಷ ಬಿ. ನಜೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ. ಪುರಸಭೆ ಸದಸ್ಯರುಗಳಾದ ಲಾಟಿ ದಾದಾಪೀರ್, ಜಾಕೀರ್ ಸರಖಾವಸ್, ಗೊಂಗಡಿ ನಾಗರಾಜ, ಉದ್ದಾರ ಗಣೇಶ್, ಪುರಸಭೆ ಮಾಜಿ ಸದಸ್ಯ  ಎಂ.ಜಾಫರ್ ಸಾಬ್,  ಮುಖಂಡರಾದ ಎಸ್.ಕೆ. ಶಮಿವುಲ್ಲಾ,  ಅಬ್ದುಲ್ ಸಲಾಮ್, ಸಿ. ಜಾವೇದ್, ಬೇಲ್ದಾರ್ ಬಾಷಾಸಾಬ್, ಎ. ಮೂಸಾಸಾಬ್, ಮಾಬೂಷಾ, ರಾಜಾಸಾಬ್, ಶಾಸ್ತ್ರಿ ಪೀರ್‌ದೋಷ್‌, ಉಮರಸಾಬ್, ಸೋಗಿ ಇಬ್ರಾಹಿಂ, ಎನ್. ಮಜೀದ್, ಗುಂಡಿ ನಕೇರಿ ಸತಾರ ಸಾಬ್ ಎಸ್.ಕೆ. ಸಲಾಮ್, ಜಿ. ಅಲ್ಲಾಭಕ್ಷಿ, ರಿಜ್ವಾನ್, ಬಿ. ಮಾಬುಸಾಬ್, ಎಸ್.ಆರ್.ತಿಮ್ಮಣ್ಣ, ಸೇರಿದಂತೆ ಪಟ್ಟಣದ  ಮುಸ್ಲಿಂ ಬಾಂಧವರು ಇದ್ದರು.

error: Content is protected !!