ಸಿದ್ದಮ್ಮ ಪಾರ್ಕ್‌ ಬೆಂಚ್‍ಗಳಿಗೆ ಸುಣ್ಣ-ಬಣ್ಣ

ಸಿದ್ದಮ್ಮ ಪಾರ್ಕ್‌ ಬೆಂಚ್‍ಗಳಿಗೆ ಸುಣ್ಣ-ಬಣ್ಣ

ದಾವಣಗೆರೆ, ಮಾ. 26 – ನಗರದ ಕೆ.ಬಿ ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌ನಲ್ಲಿರುವ ಈ ಹಿಂದೆ ದಾನಿಗಳು ನೀಡಿದ 32 ಕ್ಕೂ ಹೆಚ್ಚು ಬೆಂಚ್‍ಗಳು ಮತ್ತು ಕುಟೀರಕ್ಕೆ ದಾನಿಗಳು ನೀಡಿದ ಬಣ್ಣದಿಂದ ಶೃಂಗಾರಗೊಂಡಿವೆ. 

ಇತ್ತೀಚೆಗೆ ಪಾರ್ಕ್‌ ಅಭಿವೃದ್ದಿ ಸಮಿತಿಯ ಸದಸ್ಯ ಮುರುಗೇಶಪ್ಪ ಅವರನ್ನು ಭೇಟಿಯಾಗಿ ಪಾರ್ಕ್‌ನ ಸಮಸ್ಯೆಯ ಬಗ್ಗೆ ವಿವರಿಸಿದಾಗ ಬೆಂಚ್‍ ಗಳು ಮತ್ತು ಕುಟೀರಕ್ಕೆ ಬೇಕಾಗುವ ಬಣ್ಣವನ್ನು ಉಚಿತವಾಗಿ ನೀಡಿ ತಮ್ಮ ಔದಾರ್ಯತೆಯನ್ನು ಮೆರೆದಿದ್ದಾರೆ. 

ಪಾರ್ಕ್‌ ಅಭಿವೃದ್ದಿ ಸಮಿತಿಯ ಸದಸ್ಯರುಗ ಳಾದ ಎಂ. ಕುಬೇರಪ್ಪ, ಮಾಜಿ ಕಾಪೋರೇಟರ್ ಸುರೇಂದ್ರ ಮೊಯ್ಲಿ, ಆಕಾಶ್ ಪ್ರಿಂಟರ್ಸ್‌ನ ಟಿ. ಸುರೇಶ್, ಉದಯಸಿಂಗ್, ಬಿ.ಎಂ. ಅರುಣ್‍ಕುಮಾರ್ ರೆಡ್ಡಿ, ಬಾಲಾಜಿ ಗೋಲ್ಡ್ ಸತ್ಯನಾರಾಯಣ್, ಸತ್ಯನಾರಾಯಣ್ ಶೆಟ್ರು, ರಮೇಶ್ ಆಡಿಟರ್, ಪಾಂಡುರಂಗ್‍ರಾವ್ ಇಂಜಿನಿಯರ್, ಕರಿಸಿದ್ದಪ್ಪ, ಕೋರಿ ಹಿರಿಯಣ್ಣ, ಷಡಕಪ್ಪ ವಡ್ಡನಹಳ್ಳಿ, ಕೆ.ಇ.ಬಿ ಸತ್ಯನಾರಾಯಣ್‍ ರಾವ್, ಕೆ.ಜಿ. ಮಹೇಶಣ್ಣ ಮುಂತಾದವರು ಹಿರಿಯ ನಾಗರಿಕರು ಸೇರಿ ಮುರುಗೇಶಪ್ಪ ಅವರಿಗೆ ಶಾಲು ಹೊದಿಸಿ ಹಾರ ಹಾಕುವುದರ ಮೂಲಕ ಅವರ ಮನೆಗೆ ತೆರಳಿ ಅಭಿನಂದಿಸಿದರು.

error: Content is protected !!