ಸಿರಿಗೆರೆ : ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಆರೋಗ್ಯ ತಪಾಸಣೆ

ಸಿರಿಗೆರೆ : ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಆರೋಗ್ಯ ತಪಾಸಣೆ

ದಾವಣಗೆರೆ, ಮಾ.26- ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆಯ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಎಸ್.ಎಸ್. ಕೇರ್ ಟ್ರಸ್ಟ್,  ಜ.ಜ.ಮು ಹಾಗೂ ಎಸ್. ಎಸ್. ಐ.ಎಂ.ಎಸ್. ವೈದ್ಯಕೀಯ ಕಾಲೇಜು (ದಾವಣಗೆರೆ) ಇವರ ಸಹಯೋಗ  ದೊಂದಿಗೆ ಹಮ್ಮಿಕೊಳ್ಳಲಾಗಿದ್ದ 4 ದಿನಗಳ ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರುಗಳು 1828 ಶಾಲಾ ಮಕ್ಕಳ ಆರೋಗ್ಯ  ತಪಾಸಣೆ ನಡೆಸಿ, ಅವಶ್ಯವಿರುವ ಮಕ್ಕಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು.

ಇತ್ತೀಚೆಗೆ ನಡೆದ ಎಸ್.ಎಸ್.ಕೇರ್ ಟ್ರಸ್ಟ್‍ನ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಂ ಮತ್ತು ಡಾ|| ಪ್ರಭಾ ಅವರ ಬಳಿ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಶ್ರೀಗಳು, ಸಂಸ್ಥೆಯ ಮಕ್ಕಳ ತಪಾಸಣೆ ನಡೆಸುವಂತೆ ಹೇಳಿದ್ದರು.

ಮಕ್ಕಳ ಆರೋಗ್ಯದ ಬಗ್ಗೆ ಇದ್ದ ಶ್ರೀಗಳ ಕಳವಳಕ್ಕೆ ಸ್ಪಂದಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ್, ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ಶಿಬಿರದಲ್ಲಿ ತಪಾಸಣೆ ವೇಳೆಯ ವರದಿ ಒಪ್ಪಿಸಿದರು. ನಂತರ ಶ್ರೀಗಳು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಆಶೀರ್ವದಿಸಿದರು.

error: Content is protected !!