ಜಿಗಳಿ : ಶುದ್ಧ ಕುಡಿಯುವ ನೀರಿನ ವಿತರಣೆ ಮತದಾನ ಕುರಿತು ಜಾಗೃತಿ

ಜಿಗಳಿ : ಶುದ್ಧ ಕುಡಿಯುವ ನೀರಿನ ವಿತರಣೆ  ಮತದಾನ ಕುರಿತು ಜಾಗೃತಿ

ಜಿಗಳಿ, ಮಾ. 26 – ಗ್ರಾಮದ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವಿತರಣೆ ಮತ್ತು ವಿಶ್ವ ಜಲ ದಿನ ಪ್ರಯುಕ್ತ ನೀರಿನ  ಬಳಕೆ ಮತ್ತು ಲೋಕಸಭೆ ಚುನಾವಣೆಯ ಮತದಾನ ಮಾಡುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯುವಕರು ಹಮ್ಮಿಕೊಂಡಿದ್ದರು. 

ಈ ಸಂದರ್ಭದಲ್ಲಿ ಯುವಕರಾದ ಲಿಂಗರಾಜ, ಅಶೋಕ, ಸಿದ್ಧರೂಢ, ಮಂಜುನಾಥ, ಮೃತ್ಯುಂಜಯ, ಕುಮಾರ, ರವಿಕುಮಾರ, ರಮೇಶ, ಜಯ್ಯಪ್ಪ, ಚಿದಾನಂದ, ರೇವಣಪ್ಪ ಮತ್ತು ರಾಜಕುಮಾರ್ ಮತ್ತು ಇತರರು ಹಾಜರಿದ್ದರು.

error: Content is protected !!