ಹರಪನಹಳ್ಳಿಯಲ್ಲಿ ನಾಳೆ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಹರಪನಹಳ್ಳಿಯಲ್ಲಿ ನಾಳೆ ಬಿಜೆಪಿ ನೂತನ  ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಹರಪನಹಳ್ಳಿ, ಮಾ.14- ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವು ನಾಡಿದ್ದು ದಿನಾಂಕ 16 ರ  ಶನಿವಾರ ಬೆಳಿಗ್ಗೆ 10.30ಕ್ಕೆ  ಇಲ್ಲಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಇಲ್ಲಿರುವ ಭಿನ್ನಾಭಿಪ್ರಾಯ ವನ್ನು ರಾಜ್ಯ ನಾಯಕರು ಸರಿಪಡಿಸುತ್ತಾರೆ ಎಂದು    ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಸಂಜೀವರೆಡ್ಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಹಾಗೂ ಸುಳ್ಳು ಭರವಸೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ನಿರ್ಲಿಪ್ತ ಭಾವನೆ ಇತ್ತು, ಬಿ.ವೈ.ವಿಜಯೇಂದ್ರ ಪಕ್ಷದ ಚುಕ್ಕಾಣಿ ಹಿಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದು, ಬಿಜೆಪಿ ಪಾರ್ಟಿಗೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.

ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ, ಜಿ.ಕರುಣಾಕರ ರೆಡ್ಡಿ ಸೇರಿದಂತೆ, ರಾಜ್ಯ ನಾಯಕರು ಆಗಮಿಸುತ್ತಾರೆ.  

 ನೂತನ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಕಳೆದ 32-33 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ, ನನ್ನ ಸೇವೆ ಗುರುತಿಸಿ, ಕೊಟ್ಟ ಹುದ್ದೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಹಕಾರ ಬ್ಯಾಂಕ್‌ ಅಧ್ಯಕ್ಷ ಜಿ.ನಂಜನಗೌಡ, ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ರಾಘವೇಂದ್ರ, ಹರಪನಹಳ್ಳಿ ಉಸ್ತುವಾರಿ ಬ್ಯಾಲಹುಣಸಿ ರಾಮಣ್ಣ, ಜಿಲ್ಲಾ ಕಾರ್ಯದರ್ಶಿ ಕುಸುಮಾ, ಪುರಸಭಾ ಮಾಜಿ ಅಧ್ಯಕ್ಷ ಎಚ್‌.ಎಂ.ಅಶೋಕ, ಕಣವಿಹಳ್ಳಿ ಮಂಜುನಾಥ, ಮಂಜಾನಾಯ್ಕ, ಮುತ್ತಿಗೆ ವಾಗೀಶ, ಬಿ.ವೈ.ವೆಂಕಟೇಶನಾಯ್ಕ, ಚೆನ್ನನಗೌಡ, ಉದಯಕುಮಾರ, ಸಿಂಗ್ರಿಹಳ್ಳಿ ಮರಿಯಪ್ಪ, ಹಲುವಾಗಲು ದ್ಯಾಮಜ್ಜ, ಕಡತಿ ರಮೇಶ, ಜಟ್ಟೆಪ್ಪ, ಕಡಕೋಳ ಸಿದ್ದಣ್ಣ ಉಪಸ್ಥಿತರಿದ್ದರು.

error: Content is protected !!