ದೋರನಹಳ್ಳಿ ಹಿರೇಮಠಕ್ಕೆ ಉತ್ತರಾಧಿಕಾರಿ : ರಂಭಾಪುರಿ ಶ್ರೀ

ದೋರನಹಳ್ಳಿ ಹಿರೇಮಠಕ್ಕೆ ಉತ್ತರಾಧಿಕಾರಿ : ರಂಭಾಪುರಿ ಶ್ರೀ

ಹುಬ್ಬಳ್ಳಿ, ಮೇ 23- ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ ಶ್ರೀಮದ್‌ ರಂಭಾಪುರಿ ಶಾಖಾ ದೋರನಹಳ್ಳಿ ಸಂಸ್ಥಾನ ಹಿರೇಮಠಕ್ಕೆ ಉಟಗಿ ಹಿರೇ ಮಠದ ಶಿವಪ್ರಸಾದ್ ಎಂಬ ವಟುವನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದ್ದಾರೆ.

ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರೀಶ ನಿವಾಸದಲ್ಲಿ ಇಂದು ಜರುಗಿದ ಉತ್ತರಾಧಿಕಾರಿ ನಿಯುಕ್ತಿ ಸಮಾರಂಭದಲ್ಲಿ ಪಾಲ್ಗೊಂಡು ಜಗದ್ಗುರುಗಳು ಆಶೀರ್ವಚನ ನೀಡಿದರು.

ದೋರನಹಳ್ಳಿ ಹಿರೇಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರು ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದು, ತೆರವಾದ ಸ್ಥಾನಕ್ಕೆ ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದ ಗುರುಕುಲದಲ್ಲಿ ಸಂಸ್ಕೃತ ಸಾಹಿತ್ಯ, ವೇದಾ ವಿದ್ಯಾ ಪ್ರವೀಣ ಮತ್ತು ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ. ಅಧ್ಯಯನ ಗೈದ ಸತ್ಕುಲ ಪ್ರಸೂತ ಶಿವಪ್ರಸಾದ್ ಎಂಬ ವಟುವನ್ನು ನಿಯುಕ್ತಿಗೊಳಿಸಿ, ಆದೇಶ ಪತ್ರವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸಿದರು. 

ಬರಲಿರುವ ಮಾಘ ಮಾಸದಲ್ಲಿ ಶ್ರೀ ಮಠದ ಜಾತ್ರಾ ಪೂರ್ವ ಸಮಾರಂಭದಲ್ಲಿ ನೂತನ ಶ್ರೀಗಳಿಗೆ ‘ಶ್ರೀ ರೇಣುಕ ವೀರ ಮಹಾಂತೇಶ ಶಿವಾಚಾರ್ಯ ಸ್ವಾಮಿಗಳು’ ಎಂಬ ಅಭಿದಾನದಿಂದ ಶ್ರೀ ಗುರು ಪಟ್ಟಾಧಿಕಾರ ನೆರವೇರಿಸಲಾಗುವುದೆಂದರು. ಚಿಕ್ಕಮಠದ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಮತ್ತು ನಿಂಗನಗೌಡ ಪೊಲೀಸ್‌ ಪಾಟೀಲ, ವೀರಭದ್ರಪ್ಪ ಗೌಡ ಪಸ್ಟೂಲ್, ದೇವೇಂದ್ರಪ್ಪಗೌಡ ಜೋಳದ, ಮಲ್ಲಿನಾಥಗೌಡ ಮಲಗೊಂಡ, ತಿಪ್ಪಣ್ಣ ಸಾಹು ಆಂದೇಲೆ ತಮ್ಮನಗೌಡ ಜೋಳದ, ಸಂಗಣ್ಣ ಗುಡಿ, ನಿಂಗಣ್ಣ ಮಲಗೊಂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

error: Content is protected !!