ಮಲೇ ಬೆನ್ನೂರು, ಏ.8- ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ನಾಡಿದ್ದು ದಿನಾಂಕ 10 ರ ಬುಧವಾರ ಶ್ರೀ ರೇವಣಸಿದ್ದೇಶ್ವರರ ಜಯಂತ್ಯೋತ್ಸವ ಮತ್ತು ಬೆಳ್ಳೂಡಿ ಶಾಖಾ ಮಠದ 8ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6.30ಕ್ಕೆ ಹೊಳೆ ಪೂಜೆ, 8ಕ್ಕೆ ಮಹಾರುದ್ರಾಭಿಷೇಕ, 10.30ಕ್ಕೆ ದೊಡ್ಡ ಎಡೆ ಪೂಜೆ ಮತ್ತು 11.30ಕ್ಕೆ ಧರ್ಮಸಭೆ ನಡೆಯಲಿದೆ.
May 3, 2024