ದೊಣೆಹಳ್ಳಿ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು

ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಉಚಿತ ಆರೋಗ್ಯ ತಪಾಸಣಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಅಡವಿಹಳ್ಳಿ ಹಾಲಸ್ವಾಮಿ ಮಠದ ಶ್ರೀ ವೀರಗಂಗಾಧರ ಹಾಲಸ್ವಾಮಿಗಳು ಸಾನ್ನಿಧ್ಯ ವಹಿಸುವರು. 

ನೇತ್ರ ತಜ್ಞರೂ, ಕೂಡ್ಲಿಗಿ ಶಾಸಕರಾದ ಎನ್.ಟಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಡಿ.ಟಿ. ರಾಘವನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ. ಪ್ರಪುಲ್ ತುಮಾಟಿ, ಡಾ. ಹೆಚ್.ಆರ್. ಶಂಕ್ರಪ್ಪ,  ಡಾ. ಹಾಲಸ್ವಾಮಿ ಕಂಬಾಳಿಮಠ, ಬಳ್ಳಾರಿ ಜಿ.ಪಂ. ಮಾಜಿ ಸದಸ್ಯ ಹೆಚ್. ರೇವಣ್ಣ, ಜಗಳೂರು ತಾ.ಪಂ. ಮಾಜಿ ಅಧ್ಯಕ್ಷ ಗಡಿಮಾಕುಂಟೆ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ತಾ.ಪಂ. ಸದಸ್ಯ ಟಿ. ಬಸವರಾಜ್, ಗ್ರಾ.ಪಂ.  ಮಾಜಿ ಅಧ್ಯಕ್ಷ ಆರ್. ವೀರೇಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಕ್ಯಾನ್ಸರ್ ತಜ್ಞ ಡಾ. ಇಬ್ರಾಹಿಂ ನಾಗನೂರು ಉಪನ್ಯಾಸ ನೀಡಲಿದ್ದು, ಡಾ. ಜಿ.ವಿ. ಶಿವಕುಮಾರ್, ಡಾ.ಎ.ಟಿ. ರಾಕೇಶ, ಡಾ.ಹೆಚ್.ಜೆ. ಪ್ರಭು ಅವರನ್ನು ಗೌರವಿಸಲಾಗುವುದು.

error: Content is protected !!