ದಾವಣಗೆರೆ, ಏ. 17- ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯಿಂದ ಆವರಗೆರೆ ವಾರ್ಡ್ನಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಸಾರ್ವಜನಿಕರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸಮಿತಿ ಜಿಲ್ಲಾಧ್ಯಕ್ಷರೂ ಆಗಿರುವ ಹಿರಿಯ ನ್ಯಾಯವಾದಿ ಎಸ್. ಪರಮೇಶ್, ಪ್ರಧಾನ ಕಾರ್ಯದರ್ಶಿ ಕವಿತಾ ಚಂದ್ರಶೇಖರ್, ಸಹ ಕಾರ್ಯದರ್ಶಿ ಅರುಣ್ಕುಮಾರ್ ಎನ್., ವಾರ್ಡಿನ ಕಾಂಗ್ರೆಸ್ ಮುಖಂಡ ಮಲ್ಲಾಪುರ ರುದ್ರೇಶ್, ನಾಯಕ ಸಮಾಜದ ಮುಖಂಡರಾದ ರಂಗಣ್ಣ, ಪೇಂಟರ್ ಲೋಕೇಶ್, ರಂಗಸ್ವಾಮಿ, ಕೆ. ಬಾನಪ್ಪ, ಚನ್ನಬಸಪ್ಪ, ಮೋಹನ ಎ.ಕೆ., ವಕೀಲರುಗಳಾದ ಹೆಚ್. ಗುರುಮೂರ್ತಿ, ವಿಜಯಕುಮಾರ್, ಚನ್ನಪ್ಪ ಎಲ್.ಕೆ. ಲೋಕಿಕೆರೆ, ರಮೇಶ್ ಲೋಕಿಕೆರೆ, ಅಣ್ಣಪ್ಪ, ರಾಜಪ್ಪ, ಪುಟಕ್ಕಳರ ಬಸವರಾಜ್, ವಿಜಯಕುಮಾರ್ ಹಾಗೂ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಾಸು ಇತರರು ಉಪಸ್ಥಿತರಿದ್ದರು