ದುರ್ಗಂಬಿಕಾ ದೇವಿ ಜಾತ್ರೆ : ರೆಡ್ ಕ್ರಾಸ್‌ನಿಂದ ರಕ್ತದಾನ ಶಿಬಿರ

ದುರ್ಗಂಬಿಕಾ ದೇವಿ ಜಾತ್ರೆ : ರೆಡ್ ಕ್ರಾಸ್‌ನಿಂದ ರಕ್ತದಾನ ಶಿಬಿರ

ದಾವಣಗೆರೆ, ಮಾ. 26 – ನಗರ ದೇವತೆ ಶ್ರೀ ದುರ್ಗಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಂಬಿಕಾ ದೇವಿ ಟ್ರಸ್ಟ್  ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ದಾವಣಗೆರೆ) ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಾತ್ರೋತ್ಸವದಲ್ಲಿ ನಡೆಸಲಾಯಿತು. 

ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆಯ ಸಭಾಪತಿ ಡಾ. ಎ.ಎಂ. ಶಿವಕುಮಾರ್ ನೇತೃತ್ವದಲ್ಲಿ, ಗೌರವ ಸಭಾಪತಿ ಗೌಡರ ಚನ್ನಬಸಪ್ಪ,
ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ, ನಿರ್ದೇಶಕ ಟಿ. ಕರಿಬಸಪ್ಪ, ಡಿ.ಎನ್. ಶಿವಾನಂದ್, ಎ.ಜೆ. ರವಿಕುಮಾರ್, ಕೆ.ಕೆ. ನಾಗರಾಜ್, ಎನ್. ಕುಮಾರ್, ಧರ್ಮೇಗೌಡ, ವೈದ್ಯಾಧಿಕಾರಿಗಳಾದ ಡಾ. ಪಿ.ಕೆ. ಬಸವರಾಜ್, ಸಂಚಾಲಕರು ಮತ್ತು ಆಪ್ತ ಸಮಾಲೋಚಕ ಎನ್.ಜಿ. ಶಿವಕುಮಾರ್‌, ಪ್ರಯೋಗಶಾಲಾ ತಂತ್ರಜ್ಞರಾದ ಗಿರೀಶ್, ಅಟೆಂಡರ್ ಪದ್ಮಬಾಯಿ, ಕೊಟ್ರೇಶ್ ಇತರರು ಹಾಜರಿದ್ದರು.

error: Content is protected !!