ಮಲೇಬೆನ್ನೂರಿನಲ್ಲಿ ಮೇಣದ ಬತ್ತಿ ಬೆಳಗಿ ಮತದಾನದ ಜಾಗೃತಿ

ಮಲೇಬೆನ್ನೂರಿನಲ್ಲಿ ಮೇಣದ ಬತ್ತಿ ಬೆಳಗಿ ಮತದಾನದ ಜಾಗೃತಿ

ಮಲೇಬೆನ್ನೂರು, ಮಾ.26- ಪಟ್ಟಣದ ಮುಖ್ಯವೃತ್ತದಲ್ಲಿ ನಿನ್ನೆ ಸಂಜೆ ಪುರಸಭೆ ವತಿಯಿಂದ ಲೋಕಸಭಾ ಚುನಾವಣೆ ಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಮೇಣದ ಬತ್ತಿ ಬೆಳಗಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದ್ದು, ತಪ್ಪದೇ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಉಪತಹಶೀಲ್ದಾರ್ ಆರ್.ರವಿ ಮಾತನಾಡಿ, ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಪುರಸಭೆ ಅಧಿ ಕಾರಿಗಳಾದ ದಿನಕರ್, ಪ್ರಭು, ಉಮೇಶ್, ಶಿವರಾಜ್, ಮಂಜು ನಾಥ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

error: Content is protected !!