ಕೊಂಡಜ್ಜಿಯಲ್ಲಿ ರಾಷ್ಟ್ರೀಯ ಸೇಫಕ್ ಟಕ್ರ ಪಂದ್ಯಾವಳಿ

ಕೊಂಡಜ್ಜಿಯಲ್ಲಿ ರಾಷ್ಟ್ರೀಯ ಸೇಫಕ್ ಟಕ್ರ ಪಂದ್ಯಾವಳಿ

ದಾವಣಗೆರೆ, ಮಾ. 26 – ಸೇಪಕ್ ಟಕ್ರ ಫೆಡರೇಷನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಅಮೆಚೂರ್ ಸಫಕ್ ಟಕ್ರ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ 26ನೇ ಸಬ್ ಜ್ಯೂನಿಯರ್ ಮತ್ತು 27ನೇ ಜ್ಯೂನಿಯರ್ ರಾಷ್ಟ್ರೀಯ ಹೊನಲು ಬೆಳಗಿನ ಪಂದ್ಯಾವಳಿಯನ್ನು ಬಾಲಕ ಹಾಗೂ ಬಾಲಕಿಯರಿಗೆ ಕೊಂಡಜ್ಜಿಯಲ್ಲಿ ಇಂದಿನಿಂದ ಇದೇ ದಿನಾಂಕ 30ರವರೆಗೆ   ಆಯೋಜಿಸಲಾಗಿದೆ. 

ಪಂದ್ಯಾವಳಿಯ ಉದ್ಘಾಟನೆಯನ್ನು ಏಷ್ಯನ್ ಸೇಪಕ್ ಟಕ್ರ ಅಸೋಸಿಯೇಷನ್ ಅಧ್ಯಕ್ಷ ಯೋಗೇಂದ್ರ ಸಿಂಗ್ ದಹಿಯಾ ನೆರವೇರಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಮುರುಗೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಪಕ್ ಟಕ್ರ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಪ್ರೇಮ ರಾಜ್, ಕಾರ್ಯದರ್ಶಿ ವೀರೇಗೌಡ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ವಿಲಾಸ್ ನೀಲಗುಂದ್ ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಕ್ರೀಡಾಪಟು  ಜಗದೀಶ್ ಅವರನ್ನು ಸನ್ಮಾನಿಸಲಾಯಿತು.  ಗಣ್ಯರೆಲ್ಲರೂ ರಾಷ್ಟ್ರದ ನಾನಾ ರಾಜ್ಯಗಳಿಂದ ಆಗಮಿಸಿರುವ 24 ಸಬ್ ಜ್ಯೂನಿಯರ್ ಹಾಗೂ ಜ್ಯೂನಿಯರ್ ತಂಡದ ಬಾಲಕ ಬಾಲಕಿಯರಿಗೆ ಶುಭ ಹಾರೈಸಿದರು. 

ಪಂದ್ಯಾವಳಿಯ ಉಸ್ತುವಾರಿಯನ್ನು ಸಂಘಟನಾ ಕಾರ್ಯದರ್ಶಿ ಕೇಶವ್ ಸೂರ್ಯವಂಶಿ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.

error: Content is protected !!