ಪ್ರಧಾನಿ ಮೋದಿ ಸಾಧನೆ ಮನೆ-ಮನೆಗೆ ತಿಳಿಸಿ

ಪ್ರಧಾನಿ ಮೋದಿ ಸಾಧನೆ ಮನೆ-ಮನೆಗೆ ತಿಳಿಸಿ

ಹರಪನಹಳ್ಳಿಯಲ್ಲಿ ಕಾರ್ಯಕರ್ತರಿಗೆ ಸಂಸದ ಜಿ.ಎಂ ಸಿದ್ದೇಶ್ವರ ಕರೆ

ಹರಪನಹಳ್ಳಿ, ಮಾ.17-  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಗಳನ್ನು ಬಿಜೆಪಿ ಕಾರ್ಯಕರ್ತರು ಮನೆ–ಮನೆಗೆ ತಿಳಿಸುವ ಮೂಲಕ ಪಕ್ಷಕ್ಕೆ ಬಲ ತುಂಬಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ  ಹರಪನಹಳ್ಳಿ ಮಂಡಲಕ್ಕೆ ನೂತನ  ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಲಕ್ಷ್ಮಣ ಅವರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವೆಲ್ಲರೂ ಬಿಜೆಪಿ ಕುಟುಂಬದವರು ಹರಪನಹಳ್ಳಿ ಹಿಂದುಳಿದ ತಾಲ್ಲೂಕು ಎಂದು ಸಾಕಷ್ಟು ಅನುದಾನ ತಂದು ಅಭಿವೃದ್ಧಿ  ಮಾಡಲು ಶ್ರಮಿಸಿದ್ದೇನೆ. ನಾನು ಜಿ.ಕರುಣಾಕರ ರೆಡ್ಡಿಯವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ.  ನಮ್ಮೆಲ್ಲರ ಗುರಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡುವುದೇ ಆಗಿದೆ ಎಂದರು.

ಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ  ಈ ಬಾರಿ ಮೋದಿಜಿಯವರ ಗಾಳಿ ಇದ್ದು, ಅವರು ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ನಾನು ಸಣ್ಣ ಕುಟುಂಬದಿಂದ ಬಂದವಳು ನನಗೆ ಹೆಚ್ಚಿನ ಜವಾಬ್ಧಾರಿ   ಕೊಟ್ಟಿದ್ದೀರಿ,  ಹೆಣ್ಣು ಈ ದೇಶದ ಕಣ್ಣು, ಮೋದಿಜಿಯವರು ನನ್ನನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ನನಗೆ ಹೆಚ್ಚಿನ ಮತ ನೀಡುವ ಮೂಲಕ ಮೋದೀಜಿಯವರ ಕೈ ಬಲಪಡಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ  ಬೂತ್‌ ಮಟ್ಟಕ್ಕೆ ಹೋಗಿ  ಹರಪನಹಳ್ಳಿ ಕ್ಷೇತ್ರದಿಂದ  25 ಸಾವಿರಕ್ಕೂ ಅಧಿಕ ಮತಗಳಿಂದ ಗಾಯತ್ರಮ್ಮನವರನ್ನು ಗೆಲ್ಲಿಸಬೇಕು  ಎಂದು ಕರೆ ನೀಡಿದರು.

ನೂತನ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಲಕ್ಷ್ಮಣ,   ಮುಖಂಡ ಜಿ.ನಂಜನಗೌಡ್ರು ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುವರ್ಣ ಆರುಂಡಿ ನಾಗರಾಜ, ಮುಖಂಡರಾದ ಹನಗವಾಡಿ ವೀರೇಶ್, ಆರುಂಡಿ ನಾಗರಾಜ, ಜಿ.ಎಂ.ಅನಿತ, ಬಾಗಳಿ ಕೊಟ್ರೇಶಪ್ಪ, ಮುತ್ತಿಗಿ ವಾಗೀಶ, ನಿಟ್ಟೂರು ಸಣ್ಣಹಾಲಪ್ಪ, ಕೆ.ಲಿಂಗಾನಂದ, ಅಯ್ಯಳಿ ತಿಮ್ಮಪ್ಪ, ಕಣಿವಿಹಳ್ಳಿ ಮಂಜುನಾಥ ಸೇರಿದಂತೆ  ಇತರರು ಇದ್ದರು

error: Content is protected !!