ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ 4.40 ಕೋಟಿ ರೂ. ವಂಚನೆ : ದೂರು

ದಾವಣಗೆರೆ, ಜೂ. 3- ಜಮೀನು ಭೂ ಪರಿವರ್ತನೆ ಮಾಡಿಸಿ, ನಿವೇಶನಗಳನ್ನು ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ 54 ಜನರಿಂದ ಅಂದಾಜು 4.40 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ನಂದಿಶ್ರೀ ಕನ್‌ಸ್ಟ್ರಕ್ಷನ್ ಮಾಲೀಕ ಮಂಜುನಾಥ್ ಅವರ ಮೇಲೆ ಹರಿಹರ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಸಂತೋಷ್ ಕುಮಾರ್ ಎಂಬುವವರು ಈ ಕುರಿತು ದೂರು ನೀಡಿದ್ದು,  ನಂದಿಶ್ರೀ ಕನ್‌ಸ್ಟ್ರಕ್ಷನ್ ಮಾಲೀಕ ಮಂಜುನಾಥ್ ಎಂಬುವವರು 2019ರಲ್ಲಿ ಅಮರಾವತಿ ಗ್ರಾಮದ ರಿ.ಸ.ನಂ. 62/1ರ 3 ಎಕರೆ
37 ಗುಂಟೆ ಜಮೀನನನ್ನು ಭೂ ಪರಿವರ್ತನೆ ಮಾಡಿಸಿ ನಿವೇಶನಗಳನ್ನಾಗಿ ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ, ನನ್ನಿಂದ 7.20 ಲಕ್ಷ ರೂ. ಹಣ ಸೇರಿದಂತೆ 54 ಜನರಿಂದ ಸುಮಾರು
4.40 ಕೋಟಿ ರೂಪಾಯಿ ಪಡೆದು ಜಮೀನನ್ನು ಭೂ ಪರಿವರ್ತನೆ ಮಾಡಿ, ನಿವೇಶನ ಮಾಡದೆ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಇಂದು, ನಾಳೆ ಎಂದು ಸುಳ್ಳು ಹೇಳುತ್ತಾ, ವಂಚಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

error: Content is protected !!