ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಂಸತ್‌ಗೆ ಕಳುಹಿಸಲು ಎಸ್ಸೆಸ್ಸೆಂ ಮನವಿ

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಂಸತ್‌ಗೆ  ಕಳುಹಿಸಲು ಎಸ್ಸೆಸ್ಸೆಂ ಮನವಿ

ದಾವಣಗೆರೆ,ಏ.24-  ವಿದ್ಯಾವಂತೆ, ಸರಳ ಸಜ್ಜನಿಕೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಅವರನ್ನು ಗೆಲ್ಲಿಸಿ ಲೋಕಸಭೆ ಕಳುಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು.

ನಗರದ ಭಾರತ್ ಕಾಲೋನಿಯ ಜಗಳೂರು ಮಾಲಿಂಗಪ್ಪ ಮಿಲ್ ಆವರಣದಲ್ಲಿ ಮತ ಯಾಚನೆ ಮಾಡಿ  ಅವರು ಮಾತನಾಡಿ ದರು. 

ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣತೊಟ್ಟಿದೆ. ದೇಶದ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಸರ್ಕಾರದ ಗ್ಯಾರಂಟಿ ಯೋಜನೆಗಳೇ ಇದಕ್ಕೆ ಸಾಕ್ಷಿ ಎಂದ ಸಚಿವರು, ಮಹಾಲಕ್ಷ್ಮಿ ಯೋಜನೆ ಯಿಂದ ಇನ್ನಷ್ಟು ಬಡವರಿಗೆ ಹಣ ಉಳಿತಾಯಕ್ಕೆ ಸಹಕಾರಿ ಯಾಗಲಿದೆ ಎಂದರು. 

ಇಲ್ಲಿನ ಮುಖಂಡರು ಗಳು ಯಾವುದೇ ವೈಮನಸ್ಸು ಗಳಿದ್ದರೂ ಅವುಗಳನ್ನು ದೂರವಿಟ್ಟು, ಜಿಲ್ಲೆಯ ಅಭಿವೃದ್ಧಿಗಾಗಿ ಪಣತೊಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಮತ ನೀಡಿ ಗೆಲ್ಲಿಸಿ, ಹೆಚ್ಚು ಹೆಚ್ಚು ಅನುದಾನ ತರಲು ಸಹಕರಿಸಿ ಎಂದರು. 

ಈ ಸಂದರ್ಭದಲ್ಲಿ ಹರಪನಹಳ್ಳಿಯ ಮಲ್ಲಿಕಾ ರ್ಜುನ ಸ್ವಾಮಿ, ಡಿ.ಬಸವರಾಜ್, ಕೆ.ಜಿ. ಚಿದಾನಂದ, ಮಹಾನಗರ ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಹರಿಹರದ ವಾಗೀಶ್ ಸ್ವಾಮಿ, ಕಿರುವಾಡಿ ಸೋಮಣ್ಣ,  ಕೆ.ಚಮನ್ ಸಾಬ್ ಇತರರು ಉಪಸ್ಥಿತರಿದ್ದರು.

error: Content is protected !!