ಪಂಚಮಸಾಲಿಯಿಂದ ಪ್ರತಿಭಾ ಪುರಸ್ಕಾರ

ಹೊನ್ನಾಳಿ, ಮೇ 21- ತಾಲ್ಲೂ ಕಿನ ಪಂಚಮಸಾಲಿ ಸಮಾಜವು ಪ್ರತಿ ವರ್ಷದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂನ್ 4ರ ಭಾನು ವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ಈರಣ್ಣ ಹೇಳಿದರು. ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ನಡೆದ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

  ಸಂದರ್ಭದಲ್ಲಿ ಸಮಾಜದ  ಮುಖಂಡರಾದ ಡಾ.ರಾಜಕುಮಾರ್, ಕುಂಕೋದ ಸೋಮಶೇಖರ್, ಬೆನಕನಹಳ್ಳಿ ಚನ್ನಬಸಪ್ಪ, ಕುಂಕೋದ ಹಾಲೇಶ್, ಒಡೆಯರಹತ್ತೂರ ಅಶೋಕ್, ಪಟ್ಟಣಶೆಟ್ಟಿ ವಿಜಯಕುಮಾರ್, ಚಂದ್ರಶೇಖರ್, ರೇಣುಕಪ್ಪ, ಇಡ್ಲಿ ಶಿವಣ್ಣ, ಮೃತ್ಯುಂಜಯ ಪಾಟೀಲ್, ಗೌಡ್ರ ಸಾವಿತ್ರಮ್ಮ, ಕವಿತಾ ಚನ್ನೇಶ, ಹಾಲಮ್ಮ ಬೆನಕನಹಳ್ಳಿ ಇನ್ನಿತರರಿದ್ದರು.

error: Content is protected !!