ಕೋಟೆಮಲ್ಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ಕೋಟೆಮಲ್ಲೂರು ಗ್ರಾಮದ  ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ

ಹೊನ್ನಾಳಿ, ಮಾ.1- ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ತಾಲ್ಲೂಕಿನ ಬೇಲಿಮಲ್ಲೂರು ಶ್ರೀ ಆಂಜನೇಯ ಸ್ವಾಮಿ, ಅರಕೆರೆ ಗ್ರಾಮದ ಶ್ರೀ ಹೊನ್ನತ್ತೆಮ್ಮ ದೇವಿ, ಕೋಟೆಮಲ್ಲೂರು ಗ್ರಾಮದ ಶ್ರೀ ದುರುಗಮ್ಮ ದೇವಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಬಾಳೆಲಿಂಗೇಶ್ವರ ಸ್ವಾಮಿಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ರಾಣೇಬೆನ್ನೂರಿನ ಪುರುವಂತರು ನಡೆಸಿಕೊಟ್ಟ ವೀರಗಾಸೆ ಕುಣಿತ ಭಕ್ತರ ಕಣ್ಮನ ತಣಿಸಿತು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡರು. ಪಕ್ಕದ ಗ್ರಾಮವಾದ ಬೇಲಿಮಲ್ಲೂರು ಗ್ರಾಮದ ಅನೇಕ ಮುಖಂಡರು, ಹೊನ್ನಾಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ನಾನಾ ಗ್ರಾಮಗಳ ಜನತೆ, ಶ್ರೀ ವೀರಭದ್ರೇಶ್ವರಸ್ವಾಮಿ ಒಕ್ಕಲಿನ ನೂರಾರು ಕುಟುಂಬಸ್ಥರು ಆಗಮಿಸಿದ್ದರು.

error: Content is protected !!