ದಾವಣಗೆರೆ, ಏ. 17 – ಕೆ.ಟಿ.ಜೆ ನಗರದಲ್ಲಿ ಕನ್ನಡ ರಣಧೀರ ಪಡೆ ವತಿಯಿಂದ ರಾಮನವಮಿ ಪ್ರಯುಕ್ತ ರಾಮನಿಗೆ ಪೂಜೆ ಸಲ್ಲಿಸಿ, ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಿ.ಎನ್. ಜಗದೀಶ್, ಕೇರಂ ಗಣೇಶ್, ಕೆ.ಜಿ. ಶಿವಕುಮಾರ್, ಗೋಣಪ್ಪ, ಚೇತನಕುಮಾರ್, ಡಿ.ಎಸ್. ಜಯಣ್ಣ, ಸೋಮು, ಸುರೇಶ್, ಗುರು, ಬಿ.ಕೆ. ವೆಂಕಟೇಶ್, ವಸಂತಕುಮಾರ್, ಹನುಮಂತ ಮತ್ತಿತರರು ಭಾಗವಹಿಸಿದ್ದರು.