ಹರಿಹರದಲ್ಲಿ `ನಾರಿ ಶಕ್ತಿ’ ವಂದನಾ ಕಾರ್ಯಕ್ರಮ

ಹರಿಹರದಲ್ಲಿ `ನಾರಿ ಶಕ್ತಿ’ ವಂದನಾ ಕಾರ್ಯಕ್ರಮ

ಹರಿಹರ, ಮಾ, 6- ನಗರದ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ `ನಾರಿ ಶಕ್ತಿ’ ವಂದನಾ ಕಾರ್ಯಕ್ರಮ ನಡೆಯಿತು. ಈ ಸಂಬಂಧ  ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ನೇರವಾಗಿ ವೀಕ್ಷಿಸಲಾಯಿತು. 

ಈ ವೇಳೆ ಶಾಸಕ ಬಿ.ಪಿ. ಹರೀಶ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಹಲವಾರು ಪ್ರಗತಿಪರ ಅಭಿವೃದ್ಧಿ ಕಾರ್ಯ ಗಳನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಈಗಾಗಲೇ ಹಲವಾರು ದಿನಗಳಿಂದ ಮನೆಗೆ ಭೇಟಿ ಕೊಟ್ಟು ಸಾರ್ವಜನಿಕರಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಐರಣಿ, ಬಿಜೆಪಿ ಘಟಕದ ನಗರ ಅಧ್ಯಕ್ಷ ಅಜಿತ್ ಸಾವಂತ್, ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ಮಾಜಿ ಸದಸ್ಯೆ ಅಂಬುಜಾ ಪಿ. ರಾಜೊಳ್ಳಿ, ಪ್ರಮೀಳಾ ನಲ್ಲೂರು, ಸಾಕ್ಷಿ ಸಿಂಧೆ, ರೂಪಾ ಶಶಿಕಾಂತ್, ಸುಧಾ ಸೋಳಂಕಿ, ಸುಮನ್ ಖಮಿತ್ಕರ್, ಬೆಳ್ಳೂಡಿ ಗೀತಮ್ಮ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!