ರಾಣೇಬೆನ್ನೂರಿನಲ್ಲಿ ಶಾಸಕ ಪ್ರಕಾಶ್ ನೇತೃತ್ವದಲ್ಲಿ ಶಿವರಾತ್ರಿ ವಿಶೇಷ ಕಾರ್ಯಕ್ರಮ

ರಾಣೇಬೆನ್ನೂರಿನಲ್ಲಿ ಶಾಸಕ ಪ್ರಕಾಶ್ ನೇತೃತ್ವದಲ್ಲಿ  ಶಿವರಾತ್ರಿ ವಿಶೇಷ ಕಾರ್ಯಕ್ರಮ

ರಾಣೇಬೆನ್ನೂರು, ಮಾ.6-  ಶಾಸಕ ಪ್ರಕಾಶ ಕೋಳಿವಾಡ, ಪತ್ನಿ ಪೂರ್ಣಿಮಾ ಕೋಳಿವಾಡ ಸಾರತ್ಯದ ಪಿಕೆಕೆ ಹಾಗೂ ಆನಂದ ಗಡ್ಡದ್ದೇವರಮಠ ಅವರು ಜಂಟಿಯಾಗಿ ಶಿವರಾತ್ರಿ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ನಾಡಿದ್ದು ದಿನಾಂಕ 8ರಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

ಪೌರಾಣಿಕ ಪುರುಷರ ಹಾಗೂ ಮಹಿಳೆಯರ ವೇಷ ಭೂಷಣ ಸ್ಪರ್ಧೆ ನಡೆಯಲಿದ್ದು, ತಾಯಿ ಹಾಗೂ ಮಗು  ಭಾಗವಹಿಸಬಹುದಾಗಿದೆ., ವಿಜೇತರಿಗೆ ಪ್ರಥಮ 15000/-, ದ್ವಿತೀಯ 10000/-,  ತೃತೀಯ 7500/-ಬಹುಮಾನ ನೀಡಲಾಗುವುದು. ಭಾಗವಹಿಸುವ  8 ರಿಂದ 14  ವರ್ಷದ ಮಕ್ಕಳಿಗೆ, ಪ್ರಥಮ 10000/-,  ದ್ವಿತೀಯ 7500/-,   ತೃತೀಯ 5000/-   ನಗದು,  ಜೊತೆಗೆ  ಭಾಗವಹಿಸುವ  ಎಲ್ಲ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನ ಕೊಡಲಾಗುವುದು.

ಅಂದು ಅಶೋಕ ಸರ್ಕಲ್‌ನಲ್ಲಿ ಸಂಜೆ 6 ಗಂಟೆಯಿಂದ 12 ಗಂಟೆವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ `ಸರಿಗಮಪ’ ಖ್ಯಾತಿಯ ಹನುಮಂತ ಲಮಾಣಿ, ಕಾಶೀಮ ಹಾಗೂ ರುಬಿಯಾ ಅವರಿಂದ ಮನರಂಜನೆ ಮತ್ತು  ಸ್ಥಳೀಯ ಕಲಾವಿದರಿಂದ ಹಾಸ್ಯ    ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಪತ್ರಕರ್ತರಿಗೆ ತಿಳಿಸಿದ್ದಾರೆ.

error: Content is protected !!