ಕಲಿಕೆಯೊಂದಿಗೆ ಕೌಶಲ್ಯಇಂದಿನ ಪ್ರಸ್ತುತತೆ

ಕಲಿಕೆಯೊಂದಿಗೆ ಕೌಶಲ್ಯಇಂದಿನ ಪ್ರಸ್ತುತತೆ

ಮುದೇಗೌಡ್ರ ರೇವಣಸಿದ್ದಪ್ಪ ಕಾಲೇಜಿನ ಕಾರ್ಯಕ್ರಮದಲ್ಲಿ  ಪ್ರೊ. ವೆಂಕಟೇಶ್ ಬಾಬು

ದಾವಣಗೆರೆ,ಮಾ.27- ಪ್ರಪಂಚವು ಬಹಳ ವೇಗವಾಗಿ ಬದಲಾಗುತ್ತಿದೆ ಮತ್ತು ಈ ರೂಪಾಂತರದಲ್ಲಿ ಉದ್ಯೋಗದ ಬದಲಾವಣೆಯೂ ಆಗುತ್ತಿದೆ. ಇದರಲ್ಲಿ ಕೌಶಲ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಬದಲಾವಣೆಯ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯ ಕಲಿಕೆಯೊಂದಿಗೆ ಕೌಶಲ್ಯಗಳನ್ನು ಕಲಿಯುವುದು ಪ್ರಸ್ತುತವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಪ್ರೊ. ವೆಂಕಟೇಶ್ ಬಾಬು ಹೇಳಿದರು.

 ನಗರದ ಶ್ರೀ ಮುದೇಗೌಡ್ರ ರೇವಣಸಿದ್ದಪ್ಪ ಸ್ಕೂಲ್ ಆಫ್ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ  ಆಯೋಜಿಸಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ  ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿವೆ. ಆದರೆ, ಅವಕಾಶಗಳನ್ನು ಬಳಸಿಕೊಳ್ಳಲು ತಾವು ಕೌಶಲ್ಯಗಳನ್ನು ಬೆಳೆಸಿಕೊಳ್ಳ ಬೇಕು. ಹಾಗಾಗಿ ನಿರಂತರ ಕಲಿಕೆಯೊಂದಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದರು.

ವೃತ್ತಿ ಯೋಜನೆ ಕುರಿತು ವಿವರ ನೀಡುತ್ತಾ, ವಿದ್ಯಾರ್ಥಿಗಳು ತಮ್ಮ ವೃತ್ತಿ ಆಯ್ಕೆ ಬಗ್ಗೆ ತಿಳಿದುಕೊಂಡು ನಂತರ ತಮಗೆ ಸರಿಹೊಂದುವ ವೃತ್ತಿಯನ್ನು ಆಯ್ಕೆ ಮಾಡಿ ಅದಕ್ಕೆ ಬೇಕಾಗುವ ಕೌಶಲ್ಯವನ್ನು ಬೆಳೆಸಿಕೊಂಡಾಗ ಮುಂದಿನ ಜೀವನದಲ್ಲಿ ಯಶಸ್ಸು ತಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ  ಪ್ರೊ.ಕೆ.ಎಸ್.ಮುನವಳ್ಳಿ ಮಠ್  ಪ್ರಾಸ್ತಾವಿಕವಾಗಿ ಮಾತನಾಡಿ,  ಕಾರ್ಪೊರೇಟ್ ವಲಯಗಳು ನಿರೀಕ್ಷಿಸುವಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಾಯೋಗಿಕ ತರಗತಿಗಳು ಕೂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಗುರಿ ಹೊಂದಿರುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ   ಪ್ರೊ. ರವಿಕುಮಾರ್, ಪ್ರೊ.ಮಾರುತಿ ಶಾಲಿಮನಿ, ಪ್ರೊ.ವಿನಯ್ ಎಂ.ಬಿ ಮಾತನಾಡಿದರು. ಕಾಲೇಜಿನ  ಉಪನ್ಯಾಸಕರಾದ ವಿನುತಾ ಮತ್ತು ದಿವ್ಯಾ ನಿರೂಪಿಸಿದರು.    

error: Content is protected !!