ಕರ್ನಲ್ ರವೀಂದ್ರನಾಥ್ ಜನ್ಮ ದಿನಾಚರಣೆ

ಕರ್ನಲ್ ರವೀಂದ್ರನಾಥ್ ಜನ್ಮ ದಿನಾಚರಣೆ

ದಾವಣಗೆರೆ, ಮೇ 16-  ದಾವಣಗೆರೆಯ ಹೆಮ್ಮೆಯ ಪುತ್ರ, ಕಾರ್ಗಿಲ್ ಯುದ್ಧದ ವಿಜಯದ ರೂವಾರಿಯಾಗಿದ್ದ ಕರ್ನಲ್ ಎಂ.ಬಿ. ರವೀಂದ್ರನಾಥ್ ಅವರ ಹುಟ್ಟು ಹಬ್ಬವನ್ನು  ಅವರ ಸ್ಮರಣಾರ್ಥ ನಗರದ `ವೀರಚಕ್ರ ಕರ್ನಲ್ ರವೀಂದ್ರನಾಥ್’ ವೃತ್ತದಲ್ಲಿ ಬಿಜಾಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ದಾವಣಗೆರೆ ಎನ್‌ಸಿಸಿ ಬೆಟಾಲಿಯನ್ ವತಿಯಿಂದ  ಇಂದು ಆಚರಿಸಲಾಯಿತು.

ದಂತವೈದ್ಯ ಡಾ. ಶಿವಮೂರ್ತಿ ದಾಗಿನಕಟ್ಟೆ ಹಾಗೂ ಎನ್‌ಸಿಸಿ ಕಮಾಂಡೆಂಟ್ ಸುತ್ತಗಟ್ಟಿ ಇವರು ಕಾರ್ಯಕ್ರಮ ಆಯೋಜಿಸಿದ್ದರು. ಬಿಜಾಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: Content is protected !!