ಶೋಷಿತ ಸಮುದಾಯಗಳಿಗೆ ಹೋರಾಟ ಅನಿವಾರ್ಯ

ಶೋಷಿತ ಸಮುದಾಯಗಳಿಗೆ ಹೋರಾಟ ಅನಿವಾರ್ಯ

ಜಗಳೂರು,ಏ.25- ತಾಲೂಕಿನ ವಿವಿಧ ಗ್ರಾಮ ಗಳಲ್ಲಿ ಇಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮತಯಾಚಿಸಿದರು. 

ಜಗಳೂರು ತಾಲ್ಲೂಕಿನ ಹುಚ್ಚಂಗಿಪುರ, ದಿದ್ದಿಗಿ, ಬಸವನಕೋಟೆ, ಅಸಗೋಡು ಗ್ರಾಮಗಳಲ್ಲಿ  ಸಾರ್ವ ಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದು ಶೋಷಿತ ಸಮುದಾಯಗಳಿಗೆ  ಹೋರಾಟ ಅನಿವಾರ್ಯವಾಗಿದೆ. ನಮ್ಮ ಸಮುದಾಯಗಳನ್ನು ಕೇವಲ ಚುನಾವಣಾ ಸಂದರ್ಭದಲ್ಲಿ ಬಳಸಿಕೊಂಡು, ನಮ್ಮ ಆಸೆ, ಆಕಾಂಕ್ಷೆಗಳಿಗೆ ಸ್ಪಂದಿಸದೇ ನಮ್ಮನ್ನು ಅವಕಾಶಗಳಿಂದ ವಂಚಿತರನ್ನಾಗಿ ಮಾಡ ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು, ಅವಕಾಶಗಳನ್ನು ಬಳಸಿಕೊಂಡು ನಮ್ಮ ಹಕ್ಕುಗಳನ್ನು ಪಡೆದುಕೊಂಡಾಗ ಮಾತ್ರ ನಮ್ಮಲ್ಲಿ ಸಮಾನತೆ ಕಾಣಲು ಸಾಧ್ಯ. ಹಟ್ಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ವ್ಯವಸ್ಥಿತವಾಗಿ ಸಂಚು ಮಾಡಲಾಗುತ್ತದೆ. ಆದ್ದರಿಂದ ನಾವು ಜಾಗೃತರಾಗಬೇಕಾಗಿದೆ. ತಳ ಸಮುದಾಯದ ಮಕ್ಕಳು ಉನ್ನತ ಮಟ್ಟದ ಅಧಿಕಾರಿಗಳಾಗಬೇಕು. ಉತ್ತಮ ಮಟ್ಟದ ಶಿಕ್ಷಣ ಪಡೆಯಬೇಕಾಗಿದೆ ಎಂದರು.

ಉಚ್ಚಂಗಿಪುರದ  ರವಿ, ಗೋಣಿಬಸಪ್ಪ, ಗುಡದಪ್ಪ, ಬೀರಪ್ಪ, ಗುಡ್ಡಪ್ಪ, ಕೋಟೆಪ್ಪ, ಅನಂತ ಚಿಕ್ಕಬೂದಿಹಾಳ್ ಸೇರಿದಂತೆ, ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

error: Content is protected !!