ಹಳೇಬಾತಿ ದರ್ಗಾಕ್ಕೆ ಎಸ್ಸೆಸ್ ಭೇಟಿ

ಹಳೇಬಾತಿ ದರ್ಗಾಕ್ಕೆ ಎಸ್ಸೆಸ್ ಭೇಟಿ

ದಾವಣಗೆರೆ, ಡಿ.29- ಹಳೇಬಾತಿಯಲ್ಲಿರುವ ಹಜರತ್ ಸೈಯದ್ ಚಮನ್ ಷಾವಲಿ ಬಾಬಾರವರ ಸಂದಲ್ ಮೊನ್ನೆ ವಿಜೃಂಭಣೆಯಿಂದ ಜರುಗಿತು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ದರ್ಗಾಕ್ಕೆ ಭೇಟಿ ನೀಡಿ, ಗಲೀಫಿ ಗಂಧ ಅರ್ಪಿಸಿ ಫಾತೇಹಾ ಖ್ವಾನಿಯಲ್ಲಿ ಪಾಲ್ಗೊಂಡು ಸಂದಲ್ ಆಚರಣೆಗೆ ಚಾಲನೆ ನೀಡಿದರು.

ಗೌರವ ಅಧ್ಯಕ್ಷ ಕೆ.ಜಿ. ಉಮೇಶ್, ಅಧ್ಯಕ್ಷ ದಾಸರ ವೆಂಕಟೇಶ್. ಸಿ.ಎನ್. ರಾಜು, ಪಿ. ಬಸವರಾಜ, ಎಂ.ಎನ್.ಆಂಜನೇಯ, ವೀರಣ್ಣ, ಶಿವಕುಮಾರ್, ಅಯೂಬ್ ಪೈಲ್ವಾನ್, ಬಿ.ಪಿ. ಸುಭಾಸ್, ಗೌಡ್ರ ಪರಮೇಶ್ವರಪ್ಪ, ಗುರು ಪಾಟೀಲ್, ಪತ್ರಕರ್ತ ಬಿ. ಸಿಕಂದರ್, ಕುರುಡಿ ಗಿರೀಶ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

error: Content is protected !!