ನೂತನ ಸಿಪಿಐ ಆಗಿ ಮಂಜುನಾಥ್ ಪಂಡಿತ್ ಅಧಿಕಾರ ಸ್ವೀಕಾರ

ನೂತನ ಸಿಪಿಐ ಆಗಿ ಮಂಜುನಾಥ್ ಪಂಡಿತ್ ಅಧಿಕಾರ ಸ್ವೀಕಾರ - Janathavaniಜಗಳೂರು, ಏ.8- ತಾಲ್ಲೂಕಿನ ಪೊಲೀಸ್ ಠಾಣೆಗೆ ನೂತನ ಆರಕ್ಷಕ ವೃತ್ತ ನಿರೀಕ್ಷಕರಾಗಿ ಪಿ.ಎನ್. ಮಂಜುನಾಥ ಪಂಡಿತ್  ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ  ದುರುಗಪ್ಪ  ಅವರು  ವರ್ಗಾವಣೆಗೊಂಡು ಕಡೂರ್ ಕಾನ್‌ಸ್ಟೇಬಲ್ ಟ್ರೈನಿಂಗ್ ಸೆಂಟರ್‌ಗೆ  ಸಿಪಿಐ ಆಗಿ ವರ್ಗಾವಣೆ ಗೊಂಡಿದ್ದರಿಂದ ಈ ಸ್ಥಾನ ತೆರವಾಗಿತ್ತು.  ಮಂಜುನಾಥ ಪಂಡಿತ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಮಠದ ಸಿರಿಗೆರೆ  ಗ್ರಾಮದವರಾಗಿದ್ದು, ಸಿರಿಗೆರೆ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ 2005 ನೇ ಸಾಲಿನ ಬ್ಯಾಚ್‌ನಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿ 2016 ರಲ್ಲಿ ಮುಂಬಡ್ತಿ ಹೊಂದಿ, ನಂತರ ಇನ್ಸ್‌ಪೆಕ್ಟರ್ ಆಗಿ ಎಸಿಬಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ನಂತರ ಹಾವೇರಿ ಜಿಲ್ಲೆಯಲ್ಲಿ   ಕರ್ತವ್ಯ ನಿರ್ವಹಿಸಿ, ವರ್ಗಾವಣೆಗೊಂಡು ಇದೀಗ ಜಗಳೂರು ಪೊಲೀಸ್ ಠಾಣೆಯ ಆರಕ್ಷಕ ವೃತ್ತ  ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

error: Content is protected !!