ನಗರದಲ್ಲಿ ನಾಳೆ ವೈದ್ಯಕೀಯ ಶಿಬಿರ

ದಾವಣಗೆರೆ, ಮೇ 6 – ಬಸವ ಜಯಂತಿ ಪ್ರಯುಕ್ತ ವೈದ್ಯಕೀಯ ಶಿಬಿರವನ್ನು ಬಸವ ಬಳಗ ಹಾಗೂ ಎಸ್‌.ಎಸ್. ನಾರಾಯಣ ಹೃದಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 8ರ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 9ರಿಂದ ನುರಿತ ವೈದ್ಯರಿಂದ ಬಿಪಿ, ಇಸಿಜಿ ಹಾಗೂ ಜನರಲ್‌ ಚೆಕಪ್‌ ಮಾಡಲಾಗುವುದು. ಹಳೆ ಕಾಯಿಲೆ ಇದ್ದವರು ಬೆಳಿಗ್ಗೆ ರಕ್ತ ಪರೀಕ್ಷೆಯಲ್ಲಿ ಮಧುಮೇಹ, ಕೊಲೆಸ್ಟ್ರಾಲ್‌ ಚೆಕಪ್‌ ಮಾಡಿಸಿಕೊಂಡು ರಿಪೋರ್ಟ್‌ ಜೊತೆಗೆ ಹಳೆಯ ದಾಖಲೆಗಳನ್ನು ತರಬೇಕು ತಿಳಿಸಿದ್ದಾರೆ. 

ವಿವರಕ್ಕೆ ವೀಣಾ ಮಂಜುನಾಥ್‌ (9972084938), ಗುಂಡಪ್ಪ (9164855358) ಅವರನ್ನು ಸಂಪರ್ಕಿಸಬಹುದು.

error: Content is protected !!