ಮೇಣದ ಬತ್ತಿ ಬೆಳಗಿಸಿ ನೇಹಾಗೆ ಶ್ರದ್ಧಾಂಜಲಿ

ದಾವಣಗೆರೆ, ಏ.28- ಹುಬ್ಬಳ್ಳಿಯ ಕಾರ್ಪೊರೇಟರ್‌ ಪುತ್ರಿ ನೇಹಾ ಹತ್ಯೆಯನ್ನು ಖಂಡಿಸಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಗುಂಡಿ ವೃತ್ತದಲ್ಲಿ ಕ್ಯಾಂಡಲ್‌ ಹಿಡಿದು ನೇಹಾ ಆತ್ಮಕ್ಕೆ ಶಾಂತಿ ಕೋರಿದರು.

ಈ ವೇಳೆ ಪರಿಷತ್‌ ಅಧ್ಯಕ್ಷ ಎ.ಜೆ. ರವಿಕುಮಾರ್ ಮಾತನಾಡಿ, ಈ ಹೀನ ಕೃತ್ಯದಿಂದ ಪಾಲಕರು ಹೆಣ್ಣು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸಲು ಭಯ ಪಡುತ್ತಿದ್ದಾರೆ ಎಂದರು.

ರೆಡ್‌ ಕ್ರಾಸ್‌ ಸಂಸ್ಥೆಯ ಗೌಡ್ರು ಚನ್ನಬಸಪ್ಪ ಮಾತನಾಡಿ, ರಾಜಕೀಯ ಪಕ್ಷಗಳು ನೇಹಾ ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಬಾರದು. ರಾಜಕೀಯವಾಗಿ ಹೇಳಿಕೆ ನೀಡುವುದರಿಂದ ಅವರ ತಂದೆ-ತಾಯಿಯರಿಗೆ ನೋವಾಗುತ್ತದೆ ಎಂದು ಹೇಳಿದರು. ಪರಶುರಾಮ್‌, ರೋಟರಿ ಸಂಸ್ಥೆಯ ಜಯಣ್ಣ, ಶ್ರೀನಿವಾಸ್‌, ಎಸ್‌.ಬಿ. ಚಂದ್ರಶೇಖರ್‌,  ಶಿವುಕುಮಾರ್‌ ಶೆಟ್ಟರ್‌, ನಾಗರಾಜ್‌, ಕೇಶವ್‌ ಎಂ. ಶೇಟ್‌, ಮೃತ್ಯುಂಜಯಪ್ಪ, ಶ್ವೇತಾ ಇದ್ದರು.  

error: Content is protected !!