ವ್ಯಕ್ತಿಯೊಬ್ಬರನ್ನು ಬಂಧಿಸಿ, 20 ಲಕ್ಷಕ್ಕೆ ಬೇಡಿಕೆ ಇಟ್ಟ ತಂಡ

ವ್ಯಕ್ತಿಯೊಬ್ಬರನ್ನು ಬಂಧಿಸಿ, 20 ಲಕ್ಷಕ್ಕೆ ಬೇಡಿಕೆ ಇಟ್ಟ ತಂಡ - Janathavani24 ಗಂಟೆಯಲ್ಲಿ ಪ್ರಕರಣ ಬೇಧಿಸಿ, ಐವರನ್ನು ಬಂಧಿಸಿದ ಪೊಲೀಸರು

ದಾವಣಗೆರೆ, ಜೂ. 2- ನಗರದ ಅಂಬಿಕಾ ನಗರದಲ್ಲಿನ ವ್ಯಕ್ತಿಯೊಬ್ಬರನ್ನು ಅಪಹರಿಸಿ, 20 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯೊಳಗೆ ಐವರನ್ನು ಬಂಧಿಸಿರುವ ಪೊಲೀಸರು, ಅಪಹರಣಕ್ಕೊಳಗಾದ ಲೋಕೇಶ್ ಅವರನ್ನು ರಕ್ಷಿಸಿದ್ದು ಕೃತ್ಯಕ್ಕೆ ಬಳಸಿದ ಇಟಿಯಾಸ್ ಕಾರು ಹಾಗೂ ಯಮಹಾ ಬೈಕ್ ವಶಪಡಿಸಿಕೊಂಡಿದ್ದಾರೆ.

ನಿನ್ನೆ ಗುರುವಾರ ಮಧ್ಯಾಹ್ನ ಶೇಖರಪ್ಪ ಗೋ ಡೌನ್ ಎದುರಿಗೆ ಅಂಬಿಕಾ ನಗರದಲ್ಲಿ ಲೋಕೇಶ್ (60) ಇವರನ್ನು ಯಾರೋ ದುಷ್ಕರ್ಮಿಗಳು ಅಪ ಹರಣ ಮಾಡಿ 20 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಲೋಕೇಶ್ ಅವರ ಮಗ ನಾಗರಾಜ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ನಡೆಸಿದ ಪೊಲೀಸರು  ಆರೋಪಿಗ ಳಾದ ನಿಟುವಳ್ಳಿಯ ಸಾಗರ್ (23), ನಂದಿಹಳ್ಳಿ ಗ್ರಾಮದ ಯುವರಾಜ (30) ಸುಂದರ್‌ ನಾಯ್ಕ (21) ದಾವಣಗೆರೆಯ ಚೇತನ್ ಕುಮಾರ್ (27) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಐವರನ್ನು ಚನ್ನಗಿರಿ ತಾಲ್ಲೂಕು ಅಂತಪುರ ಗ್ರಾಮದ ಬಳಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಆರೋಪಿತರ ಪತ್ತೆ ಹಾಗೂ ಅಪಹರಣ ಕ್ಕೊಳಗಾದ ವ್ಯಕ್ತಿಯ ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ  ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ರಾದ ಯು.ಜೆ.ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಆರ್.ಆರ್.ಪಾಟೀಲ್, ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನೂರು ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ  ಕೆಟಿಜೆ ನಗರ ಪಿಎಸ್‌ಐ ಎಸ್.ಆರ್.ಕಾಟೇ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಶಂಕರ್ ಜಾಧವ್, ಮಂಜಪ್ಪ, ಷಣ್ಮುಖ, ರವಿ ಲಮಾಣಿ, ಶಿವರಾಜ್, ಮಂಜನಗೌಡ, ಬಿ.ಆರ್.ರವಿ, ಬಸವರಾಜ್, ಹರೀಶ್ ನಾಯ್ಕ್, ತಿಮ್ಮಣ್ಣ ಎನ್.ಆರ್., ಶ್ರೀನಿವಾಸ್, ರಾಘವೇಂದ್ರ, ಶಾಂತರಾಜ್, ಡಿಸಿಐಬಿ ಘಟಕದ ಸಿಬ್ಬಂದಿಗಳಾದ ಬಾಲಾಜಿ, ರಾಘವೇಂದ್ರ, ರಮೇಶ್, ಮಜೀದ್ ಕೆ.ಸಿ., ನಟರಾಜ್, ಮಲ್ಲಿಕಾರ್ಜುನ, ಮಾರುತಿ, ಅಶೋಕ, ಆಂಜನೇಯ, ಸುರೇಶ್‌ ಅವರುಗಳನ್ನು  ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಶ್ಲ್ಯಾಘಿಸಿದ್ದಾರೆ.

error: Content is protected !!