ದಾವಣಗೆರೆ ವಾಸಿಯಾದ ದಿವಂಗತ ಹುಂಡೇಕಾರ್ ಚನ್ನಬಸಪ್ಪನವರ ಧರ್ಮಪತ್ನಿಯವರಾದ ಶ್ರೀಮತಿ ಬಸಮ್ಮ ಚನ್ನಬಸಪ್ಪ ಹುಂಡೇಕಾರ್ (ನಾಲತವಾಡ) ಅವರು ಶುಕ್ರವಾರ ಸಂಜೆ 5.45ರ ಸುಮಾರಿಗೆ ನಿಧನರಾದರು. ಸಾರಿಗೆ ಗುತ್ತಿಗೆದಾರರಾದ ಎನ್.ಸಿ. ವಿನಾಯಕ ಹಾಗೂ ಬಕ್ಕೇಶ್ವರ ಹಾರ್ಡ್ ವೇರ್ಸ್ ನ ಎನ್.ಸಿ. ನಾಗಭೂಷಣ್ ಅವರ ತಾಯಿಯಾವರಾದ ಬಸಮ್ಮ ಚನ್ನಬಸಪ್ಪ ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ದಾವಣಗೆರೆ ನಗರದ ಎಂಸಿಸಿ `ಬಿ’ ಬ್ಲಾಕ್, 2ನೇ ಮೇನ್, 2ನೇ ಕ್ರಾಸ್ನಲ್ಲಿರುವ ಮೃತರ ಸ್ವಗೃಹದಲ್ಲಿ ಶನಿವಾರ ಬೆಳಗ್ಗೆ 8.30ರಿಂದ ಅಂತಿಮ ದರ್ಶನಕ್ಕೆ ಇಡಲಾಗುವುದು. ಅಂತ್ಯಕ್ರಿಯೆಯು ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ನಗರದ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
April 25, 2024