ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್

ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್

ದಾವಣಗೆರೆ,ಏ.19-  ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಮೊನ್ನೆ ದಿನಾಂಕ 17ರಂದು ರೋಡ್ ಶೋ ನಡೆಸಿ, ಅದ್ಧೂರಿ  ಮೆರವಣಿಗೆ ಮೂಲಕ ತೆರಳಿ  ನಾಮಪತ್ರ ಸಲ್ಲಿಸಿದ್ದ   ಅವರು ಇಂದು  ಮೂರನೇ ಬಾರಿ ನಾಮಪತ್ರ ಸಲ್ಲಿಕೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿದ್ದೇನೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳು, ಸಂಕಷ್ಟಗಳನ್ನು ಅರಿತಿದ್ದೇನೆ. ಕುಟುಂಬ ರಾಜಕಾರಣದ ವಿರುದ್ಧದ ಸಿಟ್ಟು ಹಳ್ಳಿ ಮಾತ್ರವಲ್ಲ,   ನಗರ ದಲ್ಲಿಯೂ ಇದೆ. ಜನರು ಬಹಿರಂಗವಾಗಿ ಹೇಳದಿದ್ದರೂ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರಲ್ಲಿಯೂ ಅಸಮಾಧಾನ ಇದೆ. ಜನರು ಸ್ವಾಭಿಮಾನಿಯ ಸ್ವಾಭಿ ಮಾನದ ಸ್ಪರ್ಧೆ ಕುರಿತಂತೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಹಾಗಾಗಿ, ಈ ಬಾರಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿದ ಮೇಲೆಯೂ ಜನರ ಬಳಿ ಹೋಗಿದ್ದೆ. ಆಗ ಜನರು ಸ್ಪರ್ಧೆ ಮಾಡಲೇಬೇಕೆಂದು ಶೇಕಡಾ 99ರಷ್ಟು ಜನರು ಸಲಹೆ ನೀಡಿದರು. ಈ ಕಾರಣಕ್ಕಾಗಿ ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿದ್ದು, ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠವನ್ನು ಪ್ರಜ್ಞಾವಂತ ಮತದಾರರು ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

error: Content is protected !!