ನಗರಕ್ಕೆ ಕುಡಿಯುವ ನೀರು ಒದಗಿಸುವ ಟಿವಿ ಸ್ಟೇಷನ್ ಕೆರೆಗೆ ಜಿಲ್ಲಾಧಿಕಾರಿ ಭೇಟಿ

ನಗರಕ್ಕೆ ಕುಡಿಯುವ ನೀರು ಒದಗಿಸುವ  ಟಿವಿ ಸ್ಟೇಷನ್ ಕೆರೆಗೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ, ಮಾ.27- ನಗರಕ್ಕೆ ಕುಡಿಯುವ ನೀರು ಒದಗಿಸುವ ಟಿವಿ ಸ್ಟೇಷನ್ ಕೆರೆಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.

ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ 4 ಅಡಿಗೆ ಕುಸಿದಿದ್ದು ಮುಂದಿನ 15 ದಿನಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಸಂಗ್ರಹ ಮಾಡಿ, ಬೇಸಿಗೆಯಲ್ಲಿ ತೊಂದರೆ ಯಾಗ ದಂತೆ ಭದ್ರಾ ಕಾಲುವೆ ಮೂಲಕ ನೀರು ತುಂಬಿ ಸಲಾ ಗುತ್ತಿದೆ. ನೀರಿನ ಪ್ರಮಾಣ ಎಷ್ಟು ಬರುತ್ತಿದೆ, ಮುಂದಿನ ಎಷ್ಟು ದಿನಗಳು ನೀರು ಪೂರೈಕೆ ಮಾಡಬಹುದೆಂದು ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಕೆರೆಯಲ್ಲಿ ನೀರು 9 ಮೀಟರ್ ಇರಬೇಕಾಗಿತ್ತು. ಪ್ರಸ್ತುತ 4 ಅಡಿ ಮಾತ್ರ ಇದೆ. ಕೆರೆಗೆ ಮುಂದಿನ ದಿನಗಳಿಗಾಗುವಷ್ಟು ನೀರು ಸಂಗ್ರಹ ಮಾಡಲು ಸೂಚನೆ ನೀಡಿದ ಅವರು ಜನರು ಸಹ ಬೇಸಿಗೆ ಕಳೆಯುವ ವರೆಗೆ ನೀರಿನ ಮಿತ ಬಳಕೆ ಮಾಡಬೇಕೆಂದು ಮನವಿ ಮಾಡಿದರು.

ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಡಿಯುಡಿಸಿ ಯೋಜನಾ ನಿರ್ದೇಶಕ ಮಹಾಂತೇಶ್ ಉಪಸ್ಥಿತರಿದ್ದರು.

error: Content is protected !!