ಬಿ.ದೇವೇಂದ್ರಪ್ಪ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

ಬಿ.ದೇವೇಂದ್ರಪ್ಪ ಗೆಲುವಿಗೆ ಕಾರ್ಯಕರ್ತರ ಸಂಭ್ರಮ

ಹರಪನಹಳ್ಳಿ, ಮೇ 15- ಜಗಳೂರು ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಶಾಸಕ ಉಚ್ಚಂಗಿದುರ್ಗಕ್ಕೆ ಆಗಮಿಸುತ್ತಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ, ಪಾದಗಟ್ಟೆ ಬಳಿ ನೂರಾರು ಮಂದಿ ಬೆಂಬಲಿಗರು ಸೇರಿದ್ದರು. ಉತ್ಸವಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಕೆಲ ಸಮಯದ ಬಳಿಕ ಗ್ರಾಮಕ್ಕೆ ಬರಲಾಗುವುದಿಲ್ಲ ಎನ್ನುವ ಮಾಹಿತಿ ತಿಳಿದ ಕಾರ್ಯಕರ್ತರು, ಅಣಜಿ ಕ್ರಾಸ್ ಬಳಿ ಜಮಾಯಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕಾದ ಬಳಿಕ ಆಗಮಿಸಿದ ಬಿ.ದೇವೇಂದ್ರಪ್ಪ ಕಂಡ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಮೊಳಗಿತು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ಹೂವಿನ ಹಾರ ಹಾಕಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಮತದಾರರ ಗೆಲುವಾಗಿದೆ. ಎಲ್ಲಾ ಹಿರಿಯರ ಮತ್ತು ಕಿರಿಯರ ಮಾರ್ಗದರ್ಶನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅರಸೀಕೆರೆ ಬ್ಲಾಕ್ ವ್ಯಾಪ್ತಿಯಲ್ಲಿ ಕಚೇರಿ ತೆರೆದು ಅಲ್ಲಿನ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡುವುದಾಗಿ ನೂತನ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಕ್ಷೇತ್ರದ ಮತದಾರರ ಗೆಲುವಾಗಿದೆ. ಎಲ್ಲಾ ಹಿರಿಯರ ಮತ್ತು ಕಿರಿಯರ ಮಾರ್ಗದರ್ಶನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’. ಅರಸೀಕೆರೆ ಬ್ಲಾಕ್ ವ್ಯಾಪ್ತಿಯಲ್ಲಿ ಕಚೇರಿ ತೆರೆದು ಅಲ್ಲಿನ ಸಾರ್ವಜನಿಕರ ಕುಂದುಕೊರತೆಗಳನ್ನು ಅಲಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡುವುದಾಗಿ ನೂತನ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಯರಬಳ್ಳಿ ಉಮಾಪತಿ, ಶೆಟ್ಟಿನಾಯ್ಕ, ಪೂಜಾರ್ ಮರಿಯಪ್ಪ, ಸಿದ್ದೇಶ್, ಕೆಂಚಪ್ಪ, ಮಂಜುನಾಥ್, ತುಂಬಿಗೆರೆ ಶಿವಣ್ಣ, ಅಲ್ಲಾಭಕ್ಷಿ, ಅಂಜಿನಪ್ಪ ಉಪಸ್ಥಿತರಿದ್ದರು.

error: Content is protected !!