ರೈತರ ಮಕ್ಕಳಿಗೆ 10 ತಿಂಗಳವರೆಗೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

 ದಾವಣಗೆರೆ, ಮೇ.15-  ರೈತರ ಮಕ್ಕಳಿಗೆ 10 ತಿಂಗಳವರೆಗೆ  ಚಿತ್ರದುರ್ಗ ಜಿಲ್ಲೆಯ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ, ಬರುವ ಜೂನ್ ತಿಂಗಳಿಂದ ಮಾರ್ಚ್ 2024ರವರೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ದಾವಣಗೆರೆ ಅಥವಾ ಇಲಾಖಾ ವೆಬ್‍ಸೈಟ್  http://horticulturedir.karnataka.gov.in  ನಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ  ದೂ.ಸಂ: 08192-230049ನ್ನು ಸಂಪರ್ಕಿಸಬಹುದು.

error: Content is protected !!