ದಾವಣಗೆರೆ, ಏ. 28- ‘ಸ್ನೇಹ‘ ಮಹಿಳಾ ಬಳಗದ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸ್ನೇಹ ಬಳಗದ ಆಜೀವ ಗೌರವ ಅಧ್ಯಕ್ಷರಾದ ಶ್ರೀಮತಿ ಮಂಜುಳ ನಿಂಗಪ್ಪ, ಗೌರವ ಅಧ್ಯಕ್ಷರಾದ ಮಂಜುಳ ಬಸವಲಿಂಗಪ್ಪ, ಚೇತನ ಲಿಂಗರಾಜ್, ಕವಿತ ರಾಜ್, ಪುಣ್ಯ ಮಂಜುನಾಥ್, ಸ್ನೇಹ ಬಳಗದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಮಹಾನಗರ ಪಾಲಿಕೆಯ ಸದಸ್ಯ ಮಂಜುನಾಥ್ ಗಡಿಗುಡಾಳು ಹಾಗು ಅನೇಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಸ್ನೇಹ ಮಹಿಳಾ ಬಳಗದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ, ಎಸ್.ಎಸ್.ಮಲ್ಲಿಕಾರ್ಜುನ್ ರವರ ಪರವಾಗಿ ಮತ ಯಾಚನೆ ಮಾಡಿದರು.