ದಿನೇಶ್ ಕೆ. ಶೆಟ್ಟಿ ಜನ್ಮದಿನಾಚರಣೆ ನಾಳೆ ವಿವಿಧ ಸೇವಾ ಕಾರ್ಯಕ್ರಮ

ದಿನೇಶ್ ಕೆ. ಶೆಟ್ಟಿ ಜನ್ಮದಿನಾಚರಣೆ  ನಾಳೆ ವಿವಿಧ ಸೇವಾ ಕಾರ್ಯಕ್ರಮ

ದಾವಣಗೆರೆ, ಮಾ. 15- ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ನಾಡಿದ್ದು ದಿನಾಂಕ 17 ರಂದು ವಿವಿಧ ಸೇವಾ ಕಾರ್ಯಕ್ರಮಗಳನ್ನು ದಿನೇಶ್ ಕೆ. ಶೆಟ್ಟಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ಟಿ. ಯುವರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 9.30 ಕ್ಕೆ ಆವರಗೆರೆ ಗೋಶಾಲೆಯ ಗೋವುಗಳಿಗೆ ಮೇವು ವಿತರಣೆ ಮೂಲಕ ಆರಂಭವಾಗುವ ಈ ಸೇವಾ ಕಾರ್ಯಕ್ರಮದ ನಂತರ ಮಧ್ಯಾಹ್ನ 12 ಕ್ಕೆ ಬಾಷಾ ನಗರದ ಸ್ಟೇಡಿಯಂನಲ್ಲಿ ಮಹಿಳಾ ಫುಟ್ಬಾಲ್ ಪಂದ್ಯಾವಳಿಗಳ ಉದ್ಘಾಟನೆ ನಡೆಯಲಿದೆ.

ಮಧ್ಯಾಹ್ನ 12.30 ಕ್ಕೆ ವನಿತಾ ಸಮಾಜದ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ಹಾಗೂ ಮಧ್ಯಾಹ್ನ ಭೋಜನ ವಿತರಣೆ, ಮಧ್ಯಾಹ್ನ 1 ಕ್ಕೆ ಶ್ರೀ ಓಂಕಾರ ಹುಚ್ಚ ನಾಗಲಿಂಗಸ್ವಾಮಿ ಅನಾಥಾಶ್ರಮದ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆಯೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ದಿನೇಶ್ ಕೆ. ಶೆಟ್ಟಿ ಅವರ ಸ್ವಗೃಹದ ಮುಂದೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಬಳಗದ ಶ್ರೀಕಾಂತ್ ಬಗೇರ, ರಾಜು ಬಳ್ಳಾರಿ, ಬಸವರಾಜ, ಆರೋಗ್ಯಸ್ವಾಮಿ, ದುರುಗೇಶ್ ಮತ್ತಿತರರಿದ್ದರು.

error: Content is protected !!