ಕೆ.ಬಿ. ಕೋಳಿವಾಡರ ಹೇಳಿಕೆ ಖಂಡನೀಯ, ಕ್ಷಮೆಯಾಚನೆಗೆ ಸ್ವಾಭಿಮಾನಿ ಬಳಗ ಒತ್ತಾಯ

ದಾವಣಗೆರೆ, ಸೆ.27- ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿರುವ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಹೇಳಿಕೆಯನ್ನು ಸ್ವಾಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ.

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ, ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಬಿ. ಕೋಳಿವಾಡರು ಮತ್ತು ಅವರ ಪುತ್ರ ಪ್ರಕಾಶ್ ಕೋಳಿವಾಡ ಅವರಿಗೆ ಶೋಷಿತ ಹಾಗೂ ಅಹಿಂದ ವರ್ಗಗಳು ಮತ ನೀಡಿ ಗೆಲ್ಲಿಸಿದ್ದಾರೆ. ಇಂದು ಇದನ್ನು ಮರೆತು ರಾಜೀನಾಮೆಗೆ ಒತ್ತಾಯಿಸುವುದು, ಶೋಷಿತ ಅಹಿಂದ ವರ್ಗಕ್ಕೆ ಮಾಡಿದ ಅವಮಾನವಾಗಿದೆ.

ಕೋಳಿವಾಡರ ನಡುವಳಿಕೆ ಖಂಡನೀಯವಾಗಿದ್ದು, ಈ ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಸ್ವಾಭಿಮಾನಿ ಬಳಗ ಆಗ್ರಹಿಸಿದೆ.

error: Content is protected !!