ನಗರದಲ್ಲಿ ಇಂದು ವಿಶ್ವ ದೃಶ್ಯಕಲಾ ದಿನಾಚರಣೆ

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ `ವಿಶ್ವ ದೃಶ್ಯಕಲಾ ದಿನಾಚರಣೆ’ ಹಾಗೂ ಸ್ಥಳದಲ್ಲೇ `ಚಿತ್ರ ರಚನಾ ಸ್ಪರ್ಧೆ’ ಏರ್ಪಡಿಸಲಾಗಿದೆ.

ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಡಿ.ಎಚ್ ಸುರೇಶ್‌ ಮತ್ತು ಆರ್‌. ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಡಾ. ಸತೀಶ್‌ ಕುಮಾರ್‌ ಪಿ. ವಲ್ಲೇಪುರೆ ಅವರು `ಲಿಯೊನಾರ್ಡೋ ಡ ಮಿಂಚಿ’ ಕುರಿತು ಉಪನ್ಯಾಸ ನೀಡುವರು. ದತ್ತಾತ್ರೇಯ ಎನ್‌. ಭಟ್ಟ ಅವರು `ಮತದಾನ ಜಾಗೃತಿ’ ಕುರಿತು ಉಪನ್ಯಾಸ ನೀಡಲಿದ್ದಾರೆ.

error: Content is protected !!