ಬಾಡಾ ಕ್ರಾಸ್ನಲ್ಲಿ ರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ 266 ನೇ ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯ ಕ್ರಮವನ್ನು ಇಂದು ಮಧ್ಯಾಹ್ನ 12 ಕ್ಕೆ ಏರ್ಪಡಿ ಸಲಾಗಿದೆ. ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಥಣಿ ಎಸ್. ವೀರಣ್ಣ, ಎ.ಹೆಚ್. ಶಿವಯೋಗಿ ಸ್ವಾಮಿ ಉಪಸ್ಥಿತರಿರುವರು. ಅಂದಿನ ಪ್ರಸಾದ ಸೇವೆಯನ್ನು ಡಾ. ಟಿ.ಜಿ. ನಿರಂಜನ್ ಹಾಗೂ ಕುಟುಂಬ, ಪಾಲ ರಾಜಗುಪ್ತ, ಲಿಂ. ಶ್ರೀಮತಿ ಪಿ.ಆರ್. ಶಾರದ ಮತ್ತು ಸಹೋದರರು ಹಾಗೂ ಮಕ್ಕಳು ವಹಿಸಿಕೊಳ್ಳಲಿದ್ದಾರೆ.
April 27, 2024