ದಾವಣಗೆರೆ, ಮೇ 15- ಹರಿಹರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹೆಚ್ಚಿ ವಶಕ್ಕೆ ಪಡೆದಿದ್ದಾರೆ.
ಹರಿಹರ ನಗರದ ಹೊಸ ಭರಂಪುರದ ರಾಜು (25) ಹಾಗೂ ಮಾರುತಿ (24) ಬಂಧಿತರು.
ಮನೆ ಪಾಲು ಮಾಡುವ ವಿಚಾರದಲ್ಲಿ ಮನಸ್ತಾಪವಿದ್ದಿದ್ದರಿಂದ ನನ್ನ ಪತಿಯ
ತಂದೆಯ ಎರಡನೇ ಹೆಂಡತಿ
ಮಕ್ಕಳಾದ ರಾಜು ಹಾಗೂ ಮಾರುತಿ ಅವರು ನನ್ನ ಪತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತ ಕುಮಾರನ ಪತ್ನಿ ಹರಿಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು.