ದಾವಣಗೆರೆ, ಮೇ 18- ಹಿರಿಯ ಮುಖಂಡ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ನಗರದ ಶ್ರೀ ವೀರ ಮದಕರಿ ನಾಯಕ ವೃತ್ತದಲ್ಲಿ ಇಂದು ವಿಜಯೋತ್ಸವ ಆಚರಿಸಲಾಯಿತು.
ಮುಖಂಡ ಬಿ. ವೀರಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಡಿಶ್ ಮಂಜುನಾಥ್, ಸೊಸೈಟಿ ಮಂಜುನಾಥ್, ಆರ್.ಗೋವಿಂದ, ಹೆಚ್.ಕೆ. ಮುಶ್ರಫ್, ಸಿಲಿಂಡರ್ ಗಣೇಶ್, ಅಪ್ಪಿ, ಬಿ.ವಿ. ಪ್ರಮೋದ್ ಕುಮಾರ್, ಪರಶುರಾಮ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.