ವರ್ಷದ ಸಾಧನೆಯ ಸಮಾವೇಶ ; ಶಾಸಕ ಪೂಜಾರ ಇಂಗಿತ

ವರ್ಷದ ಸಾಧನೆಯ ಸಮಾವೇಶ ; ಶಾಸಕ ಪೂಜಾರ ಇಂಗಿತ - Janathavaniರಾಣೇಬೆನ್ನೂರು, ಅ.27- ಜನಪರ ಚಿಂತನೆ ಮಾಡುವ, ಅಭಿವೃದ್ಧಿಯನ್ನು ಮೂಲಮಂ ತ್ರವಾಗಿಸಿ ಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಾಯದಿಂದ ನನಗೆ ಜನಸೇವೆ ಮಾಡಲು ಮುಕ್ತ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಇಲ್ಲಿನ ಎಸ್‌.ಜೆ.ಎಂ ಮಹಿಳಾ ಕಾಲೇಜಿ ನಲ್ಲಿ ಪಶ್ಚಿಮ ಪದವೀಧರರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದು, ಈ ಬಾರಿ ಸಂಕನೂರ ಅವರನ್ನು ಆಯ್ಕೆ ಮಾಡಿರುವ ಮತದಾರರು ಈ ಬಾರಿಯೂ ಸಹ ಅವರನ್ನೇ ಆಯ್ಕೆ ಮಾಡಿ ಅಭಿವೃದ್ಧಿಗೆ ಬೆಂಬಲಿಸಲಿದ್ದಾರೆ ಎಂದು ಪೂಜಾರ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶಾಸಕನಾಗಿ ವರ್ಷವಾಗುತ್ತಲೇ ಅಭಿವೃದ್ಧಿ ಮಾಡಿದ ಎಲ್ಲ ಕೆಲ ಸಗಳ ಮಾಹಿತಿಯನ್ನು ಆಧರಿಸಿ ನೆನಪಿಗಾಗಿ ಹಾಗೂ ನನಗೆ ಕೈಜೋಡಿಸಿದ ವರ ಸ್ಮರಣೆಯ ಪುಸ್ತಕ ಬಿಡುಗಡೆ ಮಾಡುವುದಾಗಿ ಶಾಸಕರು ವಿವರಿಸಿದರು.

error: Content is protected !!