ಡಿಸಿಎಂ ಟೌನ್‌ಶಿಪ್‌ನಲ್ಲಿ ಇಂದು 19ನೇ ವರ್ಷದ ಮಹಾಶಿವರಾತ್ರಿ

ಡಿಸಿಎಂ ಟೌನ್‌ಶಿಪ್‌ನಲ್ಲಿ ಇಂದು 19ನೇ ವರ್ಷದ ಮಹಾಶಿವರಾತ್ರಿ

ಡಿಸಿಎಂ ಟೌನ್‌ಶಿಪ್ ನಾಗರಿಕರ ಸಂಘದಿಂದ ಇಂದು 19ನೇ ವರ್ಷದ ಮಹಾಶಿವರಾತ್ರಿ ಜಾಗರಣೆ, ಹಬ್ಬದ ಭಕ್ತಿ ಸಿಂಚನ-ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಶ್ರೀ ರಾಜನಹಳ್ಳಿ ಹನುಮಂತಪ್ಪನವರ ಉದ್ಯಾನ ವನದಲ್ಲಿ ಸಂಜೆ 7.30 ಗಂಟೆಗೆ ಶಿವರಾತ್ರಿ ಮಹಾ ಪೂಜೆ ಹಾಗೂ ರಾತ್ರಿ 8 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಡಿಸಿಎಂ ಟೌನ್‌ಶಿಪ್ ನಾಗರಿಕರ ಸಂಘದ ಅಧ್ಯಕ್ಷ ಕೆ. ಹಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಮಹಾಪೌರ ಎಸ್.ಟಿ. ವೀರೇಶ್ ಉಪಸ್ಥಿತರಿರುವರು. ಕಸಾಪ ನಿಕಟಪೂರ್ವ ಅಧ್ಯಕ್ಷ ಹೆಚ್.ಎಸ್. ಮಂಜು ನಾಥ ಕುರ್ಕಿ ಉಪನ್ಯಾಸ ನೀಡಲಿದ್ದಾರೆ.

ರಾಣೇಬೆನ್ನೂರಿನ ಜನನಿ ಜಾನಪದ ಕಲಾ ವೇದಿಕೆಯ ಕಲಾ ತಂಡದಿಂದ ಜಾನಪದ ಹಾಗೂ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

ಡಿಸಿಎಂ ಟೌನ್‌ಶಿಪ್ ನಾಗರಿಕರ ಸಂಘದ ಗೌರವಾಧ್ಯಕ್ಷ ಟಿ. ಮೂಡಲಗಿರಿ ಯಪ್ಪ, ಉಪಾಧ್ಯಕ್ಷರಾದ ಕೆ.ಹೆಚ್. ಮಂಜು ನಾಥರೆಡ್ಡಿ, ಕೆ.ಯು. ನಿರಂಜನ್, ಟಿ.ಆರ್. ಪದ್ಮಪ್ರಿಯ, ಕಾರ್ಯದರ್ಶಿ ಎಸ್. ಶಿವನಪ್ಪ, ಖಜಾಂಚಿ ಡಿ.ಹೆಚ್. ಚನ್ನಬಸಪ್ಪ, ಸಂಘಟನಾ ಕಾರ್ಯದರ್ಶಿಗಳಾದ ದ್ಯಾಮನಗೌಡ್ರು, ರಮೇಶ್ ಕುಲಕರ್ಣಿ, ಚನ್ನವೀರ ಶೆಟ್ರು, ಶ್ರೀಮತಿ ಎಂ. ಶಾಂತಕುಮಾರಿ, ಬಸವರಾಜ ಅಂಗಡಿ ಹಾಗೂ ಇತರರು ಉಪಸ್ಥಿತರಿರುವರು.

error: Content is protected !!