ನಗರದಲ್ಲಿಂದು ಚಿತ್ರಕಲಾ ಪ್ರದರ್ಶನ

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ   ಡಯಟ್ ಸಭಾಂಗಣದಲ್ಲಿ  ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಡಿಡಿಪಿಐ ಜಿ.ಕೊಟ್ರೇಶ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮವನ್ನು ಎಸ್ಪಿ ಉಮಾ ಪ್ರಶಾಂತ್ ಉದ್ಘಾಟಿಸಲಿದ್ದಾರೆ. ಚಿತ್ರದುರ್ಗ ಸಿಟಿಇ ಪದನಿಮಿತ್ತ ಜಂಟಿ ನಿರ್ದೇಶಕರಾದ ಲೀಲಾವತಿ ಬಹುಮಾನ ವಿತರಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಹೆಚ್. ಮಂಜುನಾಥ್, ಹೆಚ್.ಕೆ. ಲಿಂಗರಾಜ್,  ಎಸ್. ಗೀತಾ, ಮಂಜುನಾಥ್, ಬಿ.ಜಿ. ಅವುಟಿ, ಪಿ. ನಾಗರಾಜ್, ಪುಷ್ಪಲತಾ, ಹೆಚ್.ಆರ್. ಶೇರ್ ಅಲಿ, ಎಂ. ಹನುಮಂತಪ್ಪ, ಶ್ರೀನಿವಾಸ ಮೂರ್ತಿ,  ಸಿದ್ದೇಶಪ್ಪ ಜಿಗಣಪ್ಪರ, ನಾಗಭೂಷಣ ಭಾಗವಹಿಸಲಿದ್ದಾರೆ. 

ದಾವಣಗೆರೆ ಸರ್ಕಾರಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗದ
ವಿ. ಗುರುಮೂರ್ತಿ, ಮೋತಿ ವೀರಪ್ಪ ಸ.ಪ.ಪೂ. ಕಾಲೇಜಿನ ನಾರಾಯಣ ಪಿ. ಹಡಪದ್ ಇವರಿಗೆ ಜಿಲ್ಲಾ ಚಿತ್ರಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಪ್ರಶಸ್ತಿ ವಿಜೇತ ಎಂ.ಕೆ. ಪುಂಡಲೀಕ ಅವರನ್ನು ಗೌರವಿಸಲಾಗುವುದು. 

error: Content is protected !!