ಸರಸ್ವತಿ ಬಡಾವಣೆಯಲ್ಲಿ ಬಸವ ಜಯಂತಿ

ದಾವಣಗೆರೆ, ಮೇ 8- ಬಸವ ಬಳಗ, ಅಜ್ಜಂಪುರ ಶೆಟ್ರು ಸೇವಾ ಬಳಗ, ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಸಹಯೋಗದೊಂದಿಗೆ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತ್ಯೋತ್ಸವವನ್ನು ಬಸವ ಮಹಾಮನೆ, ಬಸವ ಬಳಗ, ಸರಸ್ವತಿ ಬಡಾವಣೆಯಲ್ಲಿ   ಎ.ಹೆಚ್. ಹುಚ್ಚಪ್ಪ ಗುರುಗಳ  ಅಧ್ಯಕ್ಷತೆಯಲ್ಲಿ ಮೊದಲಿಗೆ ಧ್ವಜಾರೋಹಣದೊಂದಿಗೆ ಪ್ರಾರಂಭ ಮಾಡಲಾಯಿತು.

ಬಿ. ಟಿ. ಪ್ರಕಾಶ್ ಅವರ ನಿರ್ದೇಶನದೊಂದಿಗೆ ಸರಸ್ವತಿ ನಗರದ ಕೆಲವು ಬೀದಿಗಳಲ್ಲಿ ವಚನಗಳನ್ನು ಹೇಳುತ್ತಾ ಪ್ರಭಾತ್ ಫೇರಿ, ಪ್ರಸಾದ, ಚಿಕ್ಕ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಂತರ ಎಸ್.ಎಸ್. ನಾರಾಯಣ ಹೃದಯಾಲಯದ ಡಾ. ಶಿವಕುಮಾರ್ ಹಾಗೂ ಗುಡ್ಡಪ್ಪ ಅವರು ಉಚಿತ ಆರೋಗ್ಯ ತಪಾಸಣೆ ನಡೆಸಿಕೊಟ್ಟರು.

ನಾಳೆ ಗುರುವಾರ ಬೆಳಿಗ್ಗೆ 7 ಗಂಟೆಗೆ ಚಿಕ್ಕ ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಸ್ಪರ್ಧೆಗಳು ನಡೆಯಲಿದೆ. ವಿವರಕ್ಕೆ  9008409498 ರಲ್ಲಿ ಸಂಪರ್ಕಿಸಬಹುದು ಎಂದು ಬಸವ ಬಳಗದ ಕಾರ್ಯದರ್ಶಿ ವೀಣಾ ಮಂಜುನಾಥ್ (9972084938) ತಿಳಿಸಿದ್ದಾರೆ.

error: Content is protected !!