ನ್ಯಾಮತಿಯಲ್ಲಿ ರೈತನ ಆತ್ಮಹತ್ಯೆ

ನ್ಯಾಮತಿ, ಆ.2- ಜಮೀನು ಅಭಿವೃದ್ಧಿಗೆ ಮಾಡಿದ ಸಾಲವನ್ನು ತೀರಿಸಲಾಗದೆ ನೊಂದು ವಿಷಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಿ.ಆರ್. ಬಂಗಾರಪ್ಪ ಅವರ ಪುತ್ರ ಯತೀಶ್ ಬಿ. (28) ಮೃತ ದುರ್ದೈವಿ. ತಂದೆ-ತಾಯಿ ಅನಾರೋಗ್ಯ ಪೀಡಿತರಾಗಿದ್ದು, ಮನೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುವ ಮೂಲಕ ತಂದೆಯ ಹೆಸರಿನಲ್ಲಿದ್ದ ಜಮೀನಿನ ಅಭಿವೃದ್ಧಿಗಾಗಿ ಚೀಲೂರು ಗ್ರಾಮದ ಡಿಸಿಸಿ ಬ್ಯಾಂಕ್‍ನಲ್ಲಿ 3 ಲಕ್ಷ 70 ಸಾವಿರ, ಟಿ.ಗೋಪಗೊಂಡನಹಳ್ಳಿ ಗ್ರಾಮದ ಧರ್ಮಸ್ಥಳ ಶ್ರೀ ಭಜರಂಗಿ ಸಂಘದಲ್ಲಿ 30 ಸಾವಿರ ರೂಪಾಯಿ, ಪರಿಚಯಸ್ಥರ ಬಳಿಯಲ್ಲಿ ಕೈಗಡವಾಗಿ 2 ಲಕ್ಷ 50ಸಾವಿರ ರೂಪಾಯಿ ಸಾಲ ಪಡೆದಿದ್ದನು. ಆದರೆ, ಮಳೆಯ ವೈಪರಿತ್ಯದಿಂದ ಬೆಳೆಬಾರದೇ ವಿಪರೀತ ನಷ್ಟವನ್ನು ಅನುಭವಿಸಿದ್ದರು ಎಂದು ಮೃತನ ಸಹೋದರ ನಿತೀಶ್.ಬಿ. ನ್ಯಾಮತಿ ಠಾಣೆಗೆ ದೂರು ನೀಡಿದ್ದಾನೆ ಎಂದು  ಠಾಣಾಧಿಕಾರಿ ಪಿ.ಎಸ್.ರಮೇಶ್‌ ತಿಳಿಸಿದ್ದಾರೆ.

error: Content is protected !!