ರಾಜರಾಜೇಶ್ವರಿ ವಿದ್ಯಾರ್ಥಿನಿಯರಿಗೆ `ಕನ್ನಡ ಕೌಸ್ತುಭ’ ಪ್ರಶಸ್ತಿ ಪ್ರದಾನ

ರಾಜರಾಜೇಶ್ವರಿ ವಿದ್ಯಾರ್ಥಿನಿಯರಿಗೆ  `ಕನ್ನಡ ಕೌಸ್ತುಭ’ ಪ್ರಶಸ್ತಿ ಪ್ರದಾನ

ಮಲೇಬೆನ್ನೂರು, ಆ.2- 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ್ದ ಮಲೇಬೆನ್ನೂರಿನ ಒಡೆಯರ್ ಬಸಾಪುರದ ಪಟೇಲ್ ಬಸಪ್ಪ ಎಜುಕೇಷನ್ ಅಸೋಸಿಯೇಷನ್‌ನ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರಾದ  ಗೌರಿಕಾ, ವರ್ಷಾ ಚೌಧರಿ , ರಮ್ಯಾ ಎಂ.ಎಸ್.,  ಅನುಷಾ ಜಿ.ಎಂ. ಅವರಿಗೆ ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವ ಶಂಕರಪ್ಪ ಸಮುದಾಯ ಭವನದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಚಲನಚಿತ್ರ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ಸಮ್ಮುಖದಲ್ಲಿ ಮೊನ್ನೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  `ಕನ್ನಡ ಕೌಸ್ತುಭ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು. 

ಪ್ರಶಸ್ತಿ ಪುರಸ್ಕೃತ ಎಲ್ಲಾ ವಿದ್ಯಾರ್ಥಿನಿಯರಿಗೆ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಜಿ.ಬಿ., ಪ್ರಾಂಶುಪಾಲರಾದ ಸುಜಾತ ಜಿ.ಓ., ಮುಖ್ಯೋಪಾಧ್ಯಾಯ ಎಸ್.ಶಶಿಧರ್ ಅಭಿನಂದಿಸಿದ್ದಾರೆ.

error: Content is protected !!